ಎಸ್.ಕೆ.ಎಸ್.ಎಸ್.ಎಫ್. ಅಜ್ಜಾವರ ಕ್ಲಸ್ಟರ್ : ನೂತನ ಅಧ್ಯಕ್ಷರಾಗಿ ಖಾದರ್ ಮಡಿಕೇರಿ

0

ಎಸ್.ಕೆ.ಎಸ್.ಎಸ್.ಎಫ್. ಅಜ್ಜಾವರ ಕ್ಲಸ್ಟರ್ ಸಮೀತಿಯ ವಾರ್ಷಿಕ ಮಹಾಸಭೆಯು ಜ. 4 ರಂದು ನೂರುಲ್ ಇಸ್ಲಾಂ ಮದರಸ ಅಜ್ಜಾವರ ಇದರ ಸಭಾಂಗಣದಲ್ಲಿ ಅಬ್ದುಲ್ ಖಾದರ್ ನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

SKSSF ಸುಳ್ಯ ವಲಯ ಅಧ್ಯಕ್ಷರಾದ ಅಬ್ದುಲ್ಲ ಫೈಝಿ ಸಭೆಯನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಲತೀಫ್ ಹನೀಫಿ ಕಳಂಜ ಮತ್ತು ಚುನಾವಣಾ ವೀಕ್ಷಕರಾಗಿ ತಾಜುದ್ದೀನ್ ಪಾಲ್ತಾಡ್ ರವರು ಆಗಮಿಸಿ ನೂತನ ಸಮೀತಿಯ ಆಯ್ಕ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಕೆ.ಎಂ., ಪ್ರಧಾನ ಕಾರ್ಯದರ್ಶಿಗಳಾಗಿ ರಫೀಕ್ ಹನೀಫಿ, ಕೋಶಾಧಿಕಾರಿಗಳಾಗಿ ಇಬ್ರಾಹಿಂ ಬಾತಿಷ ಮಂಡೆಕೋಲು ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಫೈಝಲ್ ಮಂಡೆಕೋಲು ಇವರುಗಳು ಆಯ್ಕೆಯಾದರು.
ಉಪಾದ್ಯಕ್ಷರುಗಳಾಗಿ ಅಬೂಬಕ್ಕರ್ ಸಿ.ಎ, ಅಬ್ದುಲ್ಲ ಫೈಝಿ ಪೈಂಬೆಚ್ಚಾಲ್, ಖಾದರ್ ತುಪ್ಪಕ್ಕಲ್ ಜೊತೆ ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಅಝ್ಹರಿ,ಸಲೀಂ ಅಡ್ಕ ಮತ್ತು ಸಿರಾಜುದ್ದೀನ್ ಎಂ.ಹೆಚ್. ಇವರುಗಳು ಆಯ್ಕೆಯಾದರು. ಕಾರ್ಯಕಾರಿ ಸಮೀತಿಯ ಸದಸ್ಯರುಗಳಾಗಿ ಶಾನಝ್ ಕಲ್ತಡ್ಕ, ರಫೀಕ್ ಮುಸ್ಲಿಯಾರ್, ರಝಾಕ್ ಮುಸ್ಲಿಯಾರ್, ಶರೀಫ್ ಸಿ.ಎ, ಹನೀಫ್ ಕೊಳಂಬೆ, ಅಬ್ದುಲ್ ರಹ್ಮಾನ್ ಎಸ್, ಮುಯಿನುದ್ದೀನ್ ಫೈಝಿ ಪೈಂಬಚ್ಚಾಲ್, ರಶೀದ್ ಮಂಡೆಕೋಲು ಮತ್ತು ಶಾಫಿ ಮುಕ್ರಿ ಅಜ್ಜಾವರ ಆಯ್ಕೆಯಾದರು.