ಎಂ.ಕೆ.ಮುತ್ತುಸ್ವಾಮಿ ನಾಗಪಟ್ಟಣ ನಿಧನ

0

ಆಲೆಟ್ಟಿ ಗ್ರಾಮದ ನಾಗಪಟ್ಟಣ ಕಾಲನಿಯ ಎಂ.ಕೆ. ಮುತ್ತುಸ್ವಾಮಿ ಜ.1 ರಂದು ಹೃದಯಘಾತದಿಂದ ನಿಧನರಾದರು.

ಇವರಿಗೆ ೮೨ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶಿವಭಾಗ್ಯಂ, ಮಕ್ಕಳಾದ ರಾಮಸ್ವಾಮಿ ಎಂ. ಹಾಗೂ ಸೊಸೆ ಯಶೋದ ಆರ್, ಮಗಳು ಪುಷ್ಪವಳ್ಳಿ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.
ಮುತ್ತು ಸ್ವಾಮಿರವರು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಹಲವು ದಶಕಗಳಿಂದ ಸಕ್ರಿಯ ಕಾರ್ಯಕರ್ತರಾಗಿ, ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡಿದ್ದರು.

ಈ ಹಿನ್ನಲೆಯಲ್ಲಿ ಮೃತರ ಮನೆಗೆ ಸುಳ್ಯದ ಕಾಂಗ್ರೆಸ್ ಮುಖಂಡರುಗಳು ತೆರಳಿ ಅಂತಿಮ ನಮಮ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಪ್ರಾರ್ಥಿವ ಶರೀರಕ್ಕೆ ಕಾಂಗ್ರಸ್ ಧ್ವಜವನ್ನು ಹೊದಿಸಿ ಅಂತಿಮ ದರ್ಶನ ಪಡೆದರು.