ಆರ್‌ಕುಟ್ ಮೊಬೈಲ್‌ನಲ್ಲಿ ಲಕ್ಕಿ ಕೂಪನ್ ಡ್ರಾ

0

ಸುಳ್ಯದ ಜನತಾ ಸ್ಟೋರ್‌ನ ಎದುರುಗಡೆ ಇರುವ ಗ್ಲೋಬಲ್ ಕಾಂಪ್ಲೆಕ್ಸ್ ಲ್ಲಿ ಕಾರ್ಯಾಚರಿಸುತ್ತಿರುವ ಆರ್‌ಕುಟ್ ಮೊಬೈಲ್‌ನಲ್ಲಿ ದಸರಾ, ದೀಪಾವಳಿ, ಕ್ರಿಸ್ಮಸ್, ಹೊಸವರ್ಷ ಹಾಗೂ ಸುಳ್ಯ ಜಾತ್ರೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಲಕ್ಕಿಕೂಪನ್ ಡ್ರಾ ಜ.10ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಉದ್ಯಮಿಗಳಾದ ಸಿ.ಆರ್.ಕೆ. ರಘು, ವಕೀಲರು, ನೋಟರಿಯಾಗಿರುವ ಶ್ರೀ ಹರಿ ಕುಕ್ಕುಡೇಲು, ಉಬರಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಆಮೈ, ನ.ಪಂ.ಸದಸ್ಯ ಶರೀಫ್ ಕಂಠಿ, ನ್ಯಾಯವಾದಿಗಳಾದ ಮಹೇಶ್, ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ಲ ರೆಹಮಾನ್, ಬಿ ಎಂ ವೆಜಿಟೇಬಲ್ ನ ಮಹಮ್ಮದ್, ದಂತ ವೈದ್ಯರಾದ ಡಾ.ಪ್ರಸನ್ನ, ಚಂದ್ರಶೇಖರ ಮೇನಾಲ, ಎಸ್ಐಕೆ ಸೌಖತ್ ಆಲಿ, ಎನ್.ಎ.ಅಬ್ದುಲ್ಲ, ಸುದ್ದಿ ಸಂಸ್ಥೆಯ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಸೇರಿದಂತೆ ಗಣ್ಯರು, ಸ್ಥಳೀಯರು ಭಾಗವಹಿಸಿದ್ದರು.

ಬಂಪರ್ ಬಹುಮಾನವಾದ ಐ ಫೋನ್-13 ವೇದಾವತಿ ಚೆಂಬುರವರಿಗೆ ಲಭಿಸಿತು. ಹಾಗೂ 5 ಸ್ಮಾರ್ಟ್ ವಾಚ್ 1546, 1456, 1897, 1464, 1163 ಈ ಕ್ರಮ ಸಂಖ್ಯೆಯವರು ಪಡೆದುಕೊಂಡರು.

ಸಂಸ್ಥೆಯ ಮಾಲಕರು ಸರ್ವರನ್ನು ಸ್ವಾಗತಿಸಿ, ಹೂ ಗುಚ್ಚ ನೀಡಿ ಗೌರವಿಸಿದರು. ಸುದ್ದಿ ಚಾನೆಲ್‌ನ ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.