ಅರಂತೋಡು : ನದಿಗೆ ಕಸ ಎಸೆಯಲು ಯತ್ನ

0

ಸಹಕಾರಿ ಸಂಘದ ಅಧ್ಯಕ್ಷರಿಂದ ತಡೆ- ದಂಡ ವಿಧಿಸಿದ ಪಂಚಾಯತ್

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಲ್ಚಾರು ಸೇತುವೆಯ ಬಳಿ ತ್ಯಾಜ್ಯ ಎಸೆಯುತ್ತಿದ್ದ ಮೈಸೂರಿನ ಕಿಶೋರ್ ಕುಮಾರ್ ಎಂಬವರನ್ನು ತಡೆದು ನಿಲ್ಲಿಸಿ ದಂಡ ವಿಧಿಸಿದ ಘಟನೆ ಇಂದು ನಡೆದಿದೆ.


ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮುಟ್ಟೆ ಮತ್ತು ಉಪಾಧ್ಯಕ್ಷರಾದ ದಯಾನಂದ ಕುರುಂಜಿ ಮತ್ತು ಕಿಶೋರ್ ಕುಮಾರ್ ಉಳುವಾರು ಇವರು ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಮೈಸೂರಿನ ಕಡೆಯಿಂದ ಕಾರಿನಲ್ಲಿ ಬಂದ ಕಿಶೋರ್ ಎಂಬವರು ಕುಲ್ಚಾರು ಸೇತುವೆಯ ಬಳಿ ಕಸ ಎಸೆಯಲು ನೋಡುತ್ತಿದ್ದರು.


ತಕ್ಷಣವೇ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಕೇಶವ ಅಡ್ತಲೆ ಇವರಿಗೆ ಮಾಹಿತಿ ನೀಡಿದರು. ಕೂಡಲೇ ಉಪಾಧ್ಯಕ್ಷರಾದ ಭವಾನಿ ಸಿ ಎ , ಸದಸ್ಯರಾದ ಪುಷ್ಪಾಧರ ಮತ್ತು ಗ್ರಾಮ ಪಂಚಾಯತ್ ನ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ತ್ಯಾಜ್ಯ ಎಸೆದ ವ್ಯಕ್ತಿಯಿಂದಲೇ ಅದನ್ನು ತೆರವುಗೊಳಿಸಿ ರೂ ೨೦೦೦ ದಂಡ ವಿಧಿಸಿದರು.