ಸುಬ್ರಹ್ಮಣ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿಯಾದ ಸುಳ್ಯದ ಮುಖಂಡರು

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರವರನ್ನು ಇಂದು ಸುಳ್ಯದ ಮುಖಂಡರು ಅತಿಥಿಗೃಹದಲ್ಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

ಮುಖಂಡರುಗಳಾದ ಎಸ್.ಎನ್ ಮನ್ಮಥ, ಎನ್.ಎ.ರಾಮಚಂದ್ರ, ಸಂತೋಷ್ ಜಾಕೆ, ಸತೀಶ್ ಎಡಮಲೆ, ಜಯಪ್ರಕಾಶ್ ಕುಜುಗೋಡು ಭೇಟಿಯಾದರು.

ಜೆಡಿಎಸ್ ಮುಖಂಡರುಗಳಾದ ಎಂ.ಬಿ ಸದಾಶಿವ, ಜಾಕೆ ಮಾಧವ ಗೌಡ, ಸೋಮಸುಂದರ ಕೂಜುಗೋಡು, ಶ್ರೀಮತಿ ಜ್ಯೋತಿ ಪ್ರೇಮಾನಂದ ಮೆಟ್ಟಿನಡ್ಕ ಮೊದಲಾದವರು ಉಪಸ್ಥಿತರಿದ್ದರು.