ಅನ್ಸಾರ್ ವತಿಯಿಂದ ಪವಿತ್ರ ಉಮ್ರಾ ಯಾತ್ರೆಗೆ ತೆರಳುತ್ತಿರುವ ಸಂಸ್ಥೆಯ ನಿರ್ದೇಶಕರಿಗೆ ಬೀಳ್ಕೂಡುಗೆ

0

ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ನಿರ್ದೇಶಕರು ಸುಳ್ಯದ ಉದ್ಯಮಿ ಟಿ.ಯಂ.ಖಾಲಿದ್ ರವರು ಕುಟುಂಬ ಸಮೇತರ ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಲು ಸೌದಿ ಅರೇಬಿಯಾದ ಮಕ್ಕಾ ಮದೀನ ಯಾತ್ರೆ ಕೈಗೊಳ್ಳಲಿರುವ ಈ ಸಂದರ್ಭದಲ್ಲಿ ಅನ್ಸಾರುಲ್ ಮುಸ್ಲಿಮೀನ್ ಅಸೊಸಿಯೇಶನ್ ವತಿಯಿಂದ ಜ.31 ರಂದು ಸಂಸ್ಥೆಯ ಕಛೇರಿಯಲ್ಲಿ ಶಾಲು ಹೊದಿಸಿ ಗೌರವಿಸಿ ದುವಾ ಮಾಡುವ ಮೂಲಕ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷರಾದ ಅಬ್ದುಲ್ ಶುಕೂರ್ ಕೆ.ಎಚ್, ಪ್ರಧಾನ ಕಾರ್ಯದರ್ಶಿ ಹನೀಫ್ ಬಿ.ಎಂ, ಕೊಶಾಧಿಕಾರಿ ಅಬ್ದುಲ್ ಹಮೀದ್ ಜನತ, ಉಪಾಧ್ಯಕ್ಷರಾದ ಜುನೈದ್ ಎನ್.ಎ, ನಿರ್ದೇಶಕರುಗಳಾದ ಕೆ.ಬಿ.ಇಬ್ರಾಹಿಂ, ಅಬ್ದುಲ್ ಗಫ್ಫಾರ್, ಹಮೀದ್.ಎಸ್.ಎಂ, ಯಾಕೂಬ್ ಎಸ್.ಟಿ, ಅಬ್ದುಲ್ ಖಾದರ್ ಪಾರೆ, ನೌಶಾದ್ ಬಾರ್ಪಣೆ ಉಪಸ್ತಿತರಿದ್ದರು.

ಸಂಸ್ಥೆಯ ಮ್ಯಾನೇಜರ್ ಮುನೀರ್ ಸ್ವಾಗತಿಸಿ ವಂದಿಸಿದರು.