ಸುಬ್ರಹ್ಮಣ್ಯ : ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನಲ್ಲಿ ದಿಕ್ಸೂಚಿ – ವೃತ್ತಿಪರ ಮಾರ್ಗದರ್ಶನ ತರಬೇತಿ ಶಿಬಿರ

0

ಜೇಸಿಐ ಪಂಜ ಪಂಚಶ್ರೀ ಮತ್ತು ಮುಡೂರು ಇನ್ಫೋಟೆಕ್ ಪಂಜ ಇದರ ಆಶ್ರಯದಲ್ಲಿ ಫೆ.6 ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದಿವಿಪೂರ್ವ ಕಾಲೇಜಿನಲ್ಲಿ ದಿಕ್ಸೂಚಿ – ವೃತ್ತಿಪರ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ನಡೆಯಿತು.


ಜೇಸಿಐ ಪೂರ್ವ ವಲಯಾದ್ಯಕ್ಷ ಜೇಸಿ ಚಂದ್ರಶೇಖರ ನಾಯರ್ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಜೇಸಿ ಜೀವನ್ ಮೆಲ್ಕಜೆ ವಹಿಸಿದ್ದರು.ವಲಯ ತರಬೇತುದಾರರಾದ ಜೇಸಿ ರಾಜೇಶ್ ಬೆಜ್ಜಂಗಳ , ಶ್ರೀ ಸುಬ್ರಹ್ಮಣ್ಯೇಶ್ವರ ಪದಿವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ಸೋಮಶೇಖರ್ ನಾಯಕ, ನಿಕಟಪೂರ್ವ ಅಧ್ಯಕ್ಷ ಜೇಸಿ ಲೋಕೇಶ್ ಅಕ್ರಿಕಟ್ಟೆ, ಘಟಕದ ಕಾರ್ಯದರ್ಶಿ ಜೇಸಿ ಜೀವನ್ ಶೆಟ್ಟಿಗದ್ದೆ, ಕಾರ್ಯಕ್ರಮ ನಿರ್ದೇಶಕ ಜೇಸಿ ಕಿರಣ್ ನೆಕ್ಕಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೇಸಿ ಶಿವಪ್ರಸಾದ್ ಹಾಲೆಮಜಲು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಜೇಸಿ ಪ್ರವೀಣ್ ಕುಂಜತ್ತಾಡಿ ಜೇಸಿವಾಣಿ ನುಡಿದರು , ಜೇಸಿ ವಾಚಣ್ಣ ಕೆರೆಮೂಲೆ ಮತ್ತು ಜೇಸಿ ಶ್ರೇಯಸ್ ತುಪ್ಪದಮನೆ ಅತಿಥಿಗಳ ಪರಿಚಯಿಸಿದರು. ಜೇಸಿ ಜೀವನ್ ಶೆಟ್ಟಿಗದ್ದೆ ವಂದಿಸಿದರು. ನಂತರ ವಲಯ ತರಬೇತುದಾರರಾದ ಜೇಸಿ ರಾಜೇಶ್ ಬೆಜ್ಜಂಗಳ ಇವರು ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನ ಬಗ್ಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಘಟಕದ ಪೂರ್ವಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.