ಮಹಾತ್ಮರೊಂದಿಗೆ ಸಹಾಯ ಯಾಚಿಸುವುದು ತೌಹೀದ್‌ ಗೆ ವಿರುದ್ಧವಲ್ಲ : ವಹ್ಹಾಬ್ ಸಖಾಫಿ ಮಂಬಾಡ್

0

ಎಸ್.ವೈ.ಎಸ್ ಸುಳ್ಯ ಝೋನ್ ವತಿಯಿಂದ ಸುಳ್ಯದಲ್ಲಿ ಸುನ್ನಿ ಆದರ್ಶ ಸಮ್ಮೇಳನ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ರಿ.) ಎಸ್.ವೈ.ಎಸ್ ಸುಳ್ಯ ಝೋನ್ ವತಿಯಿಂದ ಸುನ್ನಿ ಆದರ್ಶ ಸಮ್ಮೇಳನ ಫೆಬ್ರವರಿ 29ರಂದು ಸುಳ್ಯ ಗಾಂಧಿನಗರದಲ್ಲಿ ಜರಗಿತು.

ಎಸ್.ವೈ.ಎಸ್ ಸುಳ್ಯ ಝೋನ್ ಅಧ್ಯಕ್ಷ ಎ.ಬಿ ಅಶ್ರಫ್ ಸಅದಿ ಅಧ್ಯಕ್ಷತೆಯಲ್ಲಿ ಸುಳ್ಯ ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಕುಂಞಿಕೋಯ ತಂಙಳ್ ಸಅದಿ ಉದ್ಘಾಟಿಸಿದರು‌. ಸಯ್ಯಿದ್ ತ್ವಾಹಿರ್ ಸಅದಿ ಬಾಅಲವಿ ದುಆಗೈದರು. ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಪ್ರಾಸ್ತಾವಿಕ ಭಾಷಣಗೈದರು. ಪ್ರಗಲ್ಭ ವಾಗ್ಮಿ ಅಬ್ದುಲ್ ವಹ್ಹಾಬ್ ಸಖಾಫಿ ಮಂಬಾಡ್ ಆದರ್ಶ ಭಾಷಣಗೈದರು.

ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಸುಳ್ಯ ರೇಂಜ್ ಅಧ್ಯಕ್ಷ ಅಬೂಬಕರ್ ಮುಸ್ಲಿಯಾರ್, ಕೆ.ಸಿ.ಎಫ್ ಅಬುಧಾಬಿ ಝೋನ್ ಅಧ್ಯಕ್ಷ ಎ.ಬಿ ಹಸೈನಾರ್ ಅಮಾನಿ, ಎಸ್.ಎಂ.ಎ ಸುಳ್ಯ ರೀಜನಲ್ ಕೋಶಾಧಿಕಾರಿ ಅಬ್ದುಲ್ ಲತೀಫ್ ಹರ್ಲಡ್ಕ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ, ಸುಳ್ಯ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಮುಸ್ತಫ ಹಾಜಿ ಜನತಾ, ಪೈಚಾರ್ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಶರೀಫ್ ಪೈಚಾರ್ ಮುಂತಾದ ನಾಯಕರು ಉಪಸ್ಥಿತರಿದ್ದರು. ಫೈಝಲ್ ಝುಹ್ರಿ ಕಲ್ಲುಗುಂಡಿ ಸ್ವಾಗತಿಸಿ ಸಿದ್ದೀಖ್ ಗೂನಡ್ಕ ವಂದಿಸಿದರು.