ಕಲ್ಲುಗುಂಡಿ: ಅಪಘಾತದಲ್ಲಿ ಕಾಲಿಗೆ ಗಾಯಗೊಂಡು ಕುಂಟುತ್ತಾ ನಡೆಯುತ್ತಿದ್ದ ಹೋರಿ

0

ಸಂಪಾಜೆ ಗ್ರಾ.ಪಂ. ಉಪಾಧ್ಯಕ್ಷರ ಉಪಸ್ಥಿತಿಯಲ್ಲಿ ಪಶು ವೈದ್ಯಾಧಿಕಾರಿಯಿಂದ ಚಿಕಿತ್ಸೆ

ಕಳೆದ ಕೆಲವು ದಿನಗಳಿಂದ ರಸ್ತೆ ಅಪಘಾತ ಸಂಭವಿಸಿ, ನಡೆಯಲು ಕಷ್ಟಪಡುತ್ತಿದ್ದ ಹೋರಿಗೆ ಸಂಪಾಜೆ ಗ್ರಾ.ಪಂ. ಉಪಾಧ್ಯಕ್ಷರು ಹಾಗೂ ಸ್ಥಳೀಯರ ಸಹಕಾರದಿಂದ ಅರಂತೋಡು ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ ಘಟನೆ ದ‌.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಮಾ.1ರಂದು ವರದಿಯಾಗಿದೆ.

ವಾರೀಸುದಾರರಿಲ್ಲದ ಹೋರಿಯೊಂದು ಕಳೆದ ಕೆಲವು ದಿನಗಳ ಹಿಂದೆ ರಸ್ತೆ ಅಪಘಾತ ಸಂಭವಿಸಿ , ಕಲ್ಲುಗುಂಡಿ ಪೇಟೆಯಲ್ಲಿ ಕುಂಟುತ್ತಾ ನಡೆಯುತ್ತಿದ್ದು, ವಿಷಯ ತಿಳಿದ ಸಂಪಾಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಸ್.ಕೆ. ಹನೀಫ್ ಅವರು ಸ್ಥಳೀಯರ ಸಹಕಾರದಿಂದ ಅರಂತೋಡು ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಪಾಲಾಕ್ಷ ಅವರನ್ನು ಕರೆಸಿ, ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ.


ಹೋರಿಗೆ ಚಿಕಿತ್ಸೆ ಕೊಡಿಸುವಲ್ಲಿ ಸ್ಥಳೀಯರಾದ ರೊನಾಲ್ಡ್, ರಾಜೇಶ್, ಹನೀಫ್ ಅಟೋ, ಹನೀಫ್ ಬಿ.ಎಸ್. ನವೀನ, ಉಮೇಶ , ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಸೇರಿದಂತೆ ಮತ್ತಿತರರು ಸಹಕರಿಸಿದರೆಂದು ತಿಳಿದುಬಂದಿದೆ.