ಸುಬ್ರಹ್ಮಣ್ಯ: ಕುಮಾರಧಾರ ನದಿ ಸ್ವಚ್ಛತಾ ಕಾರ್ಯದಲ್ಲಿ ರವಿ ಕಕ್ಕೆ ಪದವು ಸಮಾಜ ಸೇವಾ ತಂಡ

0

ಕುಕ್ಕೆ ಸುಬ್ರಹ್ಮಣ್ಯ ದ ಕುಮಾರಧಾರ ನದಿ ಸ್ವಚ್ಚತಾ ಕಾರ್ಯವನ್ನು ರವಿ ಕಕ್ಕೆ ಪದವು ಸಮಾಜ ಸೇವಾ ತಂಡ ಮಾ.3 ರಂದು ಮಾಡಿದ್ದು ಭಕ್ತರು ಎಸೆದಿರುವ ರಾಶಿ ರಾಶಿ ಬಟ್ಟೆ, ಪ್ಲಾಸ್ಟಿಕ್ ಹಾಗೂ ಕಚ್ಚಾ ವಸ್ತುಗಳನ್ನು ಹೆಕ್ಕಲಾಗಿದೆ. ನೀರಿನಲ್ಲಿದಂತಹ ಬಟ್ಟೆ, ಬಾಟಲಿಗಳು ಹಾಗು ಕಚ್ಚಾ ವಸ್ತುಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.

ಇಷ್ಟೊಂದು ಕಸ ಹಾಕುತಿದ್ದ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಎಷ್ಟು ಮಾಹಿತಿ ನೀಡಿದರು ಪ್ರಯೋಜನವಾಗದಿರುವುದು ಬೇಸರದ ಸಂಗತಿಯಾಗಿದೆ.


ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಡಾ.ರವಿಕಕ್ಕೆ ಪದವು ಅವರ ಮಾರ್ಗದರ್ಶನದಲ್ಲಿ ಇಂದಿನ ಸ್ವಚ್ಛತಾ ಕಾರ್ಯಕ್ರಮದ ನಾಯಕ ರವಿ ಕುಲ್ಕುಂದ ರವರ ನೇತೃತ್ವದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಹೆಕ್ಕಿದ ಕಸವನ್ನು ವಾಹನದ ಮೂಲಕ ಸಾಗಿಸಿ ವಿಲೇವಾರಿ ಮಾಡಲಾಯಿತು.