ಸುಬ್ರಮಣ್ಯದ ಕುಲ್ಕುಂದ ಬಳಿ ನಿರಂತರ ಆನೆ ದಾಳಿ ಕೃಷಿ ನಾಶ

0

ಸುಬ್ರಹ್ಮಣ್ಯದ ಕುಲ್ಕುಂದ ಎಂಬಲ್ಲಿ ಕಳೆದ ಒಂದು ವಾರದಿಂದ ನಿರಂತರ ಆನೆ ಕೃಷಿಗೆ ದಾಳಿ ಮಾಡುತ್ತಿದ್ದು ಅಪಾರ ಕೃಷಿ ನಾಶ ಉಂಟಾಗಿದೆ.


ಕುಲ್ಕುಂದ ಡಿಪೋ, ಕುದುರೆಮಾಜಲು, ಬಿಡಿನಗದ್ದೆ, ಕುಲ್ಕುಂದ ಕಾಲನಿ ಯಲ್ಲಿ ದಿನಂಪ್ರತಿ ರಾತ್ರಿ ಆನೆ ಸಂಚರಿಸಿ ಕೃಷಿ ನಾಶ ಪಡಿಸಿದೆ,ಹಲವಾರು ತೆಂಗಿನ ಮರ, ನೂರಾರು ಅಡಿಕೆ ಮರ, ಬಾಳೆ ನಾಶ ಪಡಿಸಿದೆ.

ಬಾಲಕೃಷ್ಣ ಬೀಡಿನಗದ್ದೆ, ಉಮೇಶ್ ಬೀಡಿನ ಗದ್ದೆ ಅವರುಗಳ ತೋಟ ಅಲ್ಲದೆ ಈ ಭಾಗದ ಹಲವರ ತೋಟಕ್ಕೆ ಆನೆ ದಾಳಿ ಮಾಡಿದೆ.