ಕೆವಿಜಿ ಸಮೂಹ ಸಂಸ್ಥೆಗಳಲ್ಲಿ ಮಹಿಳಾ ದಿನಾಚರಣೆ : ಸುಳ್ಯ ಶಾಸಕಿ ಸಹಿತ ಅನೇಕ ಸಾಧಕರಿಗೆ ಸನ್ಮಾನ

0

ಹರಿಣಿ ಸದಾಶಿವರಿಗೆ ಜಾನಕಿ ವೆಂಕಟರಮಣ ಪ್ರಶಸ್ತಿ

ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸುಳ್ಯದ ನೂತನ ಶಾಸಕಿ ಭಾಗೀರಥಿ ಮುರುಳ್ಯ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಸುಳ್ಯದಲ್ಲಿ ವಿಶೇಷ ಮಕ್ಕಳ ಶಾಲೆಯನ್ನು ನಿರ್ಮಿಸಿ ಬಡ ವಿಶೇಷ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಹರಿಣಿ ಸದಾಶಿವರವಿಗೆ ಜಾನಕಿ ವೆಂಕಟರಮಣ ಅವಾರ್ಡ್ ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಆಶಾಕಾರ್ಯಕರ್ತರಿಗೆ,ಎಲ್ ಹೆಚ್ ವಿ ಯವರಿಗೆ,ಅಂಗನವಾಡಿ ಕಾರ್ಯಕರ್ತರನ್ನು ಗೌರವಿಸಿ ಅಭಿನಂದಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ‌ಡಾ.ಚಿದಾನಂದ ಕೆ.ವಿ ವಹಿಸಿದ್ದರು.
ಉಪಾಧ್ಯಕ್ಷೆ ಶೋಭ ಚಿದಾನಂದ,
ಕರ್ನಾಟಕ ಸರ್ಕಾರದ ಮೀನುಗಾರಿಕಾ ಸಹಾಯಕ ನಿರ್ದೇಶಕಿ ಮಿಲನ ಕೆ ಭರತ್,ಡಾ.ಐಶ್ವರ್ಯ, ಡಾ ಲೀಲಾದರ್ ಮೊದಲಾದವರು ಉಪಸ್ಥಿತರಿದ್ದರು.