ಬೆಳ್ಳಾರೆಯಲ್ಲಿ ಶಿವಕಿರಣ ಬಿಲ್ಡರ್ಸ್, ಅರ್ಥ್ ಮೂವರ್ಸ್, ಬೋರ್ ವೆಲ್ಸ್ ಶುಭಾರಂಭ

0

ಶಿವರಾಮ ರೈ ಕಜೆ ಮಾಲಕತ್ವದ ಶಿವಕಿರಣ ಬಿಲ್ಡರ್ಸ್, ಅರ್ಥ್ ಮೂವರ್ಸ್, ಬೋರ್ ವೆಲ್ಸ್ ನ 2 ನೇ ಶಾಖೆ ಬೆಳ್ಳಾರೆಯ ಹರಿಯಪ್ಪ ವಾಣಿಜ್ಯ ಸಂಕೀರ್ಣದಲ್ಲಿ ಮಾ.‌ 8ರಂದು ಶುಭಾರಂಭಗೊಂಡಿತು.


ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕಿ ಕು. ಭಾಗೀರಥಿ ಮುರುಳ್ಯ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಟ್ಟಡದ ಮಾಲಕರಾದ ನಿವೃತ್ತ ಅಂಚೆ ಇಲಾಖಾಧಿಕಾರಿ ಈಶ್ವರ ಬೆಳ್ಳಾರೆ ಮತ್ತು ಕೆದಂಬಾಡಿ ಕೆಯ್ಯೂರು ಸಹಕಾರಿ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕಳ ದೀಪ ಬೆಳಗಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕರಾದ ಶಿವರಾಮ ರೈ ಬಜನಿ ಮಾಡಾವು ಕಜೆಯವರು ಅತಿಥಿಗಳನ್ನು ಸ್ವಾಗತಿಸಿದರು. ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಜಗನ್ನಾಥ ರೈ ಬಜನಿ, ಬಿಜೆಪಿ ಸುಳ್ಯ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಕಾರ್ಯದರ್ಶಿ ಶ್ರೀನಾಥ್ ರೈ ಬಾಳಿಲ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ನಮಿತಾ ರೈ, ಬಾಳಿಲ ಗ್ರಾ.ಪಂ. ಉಪಾಧ್ಯಕ್ಷ ರಮೇಶ್ ರೈ ಬಾಳಿಲ, ಸದಸ್ಯ ಹರ್ಷ ಜೋಗಿಬೆಟ್ಟು, ಕೆ.ಎಸ್.ಆರ್.ಟಿ.ಸಿ ಸುಬ್ರಹ್ಮಣ್ಯ ವಿಭಾಗದ ಸಂಚಾರ ನಿಯಂತ್ರಕರಾದ ಭಾಸ್ಕರ ರೈ ಬಜನಿ, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ, ಬೆಳ್ಳಾರೆ ಕಾಮಧೇನು ಗ್ರೂಪ್ಸ್ ಮಾಲಕ ಮಾಧವ ಗೌಡ ಕಾಮಧೇನು, ವಸಂತ ಪೂಜಾರಿ ಬೆಳ್ಳಾರೆ, ಪ್ರವೀಣ್ ಕುಮಾರ್ ಬೆಳ್ಳಾರೆ, ಶಿವರಾಮ ರೈ ಬಜನಿಯವರ ಪತ್ನಿ ಶ್ರೀಮತಿ ಮಮತಾ ಎಸ್.ರೈ, ಕುಟುಂಬಸ್ಥರಾದ ಸುರೇಶ್ ರೈ ಬಜನಿ ಕಜೆ, ಶ್ರೀಮತಿ ಸವಿತಾ ಎಸ್. ರೈ, ಚಂದ್ರಶೇಖರ ರೈ ಬಜನಿ ಕಜೆ, ಶ್ರೀಮತಿ ಲಾವಣ್ಯ ಸಿ. ರೈ ಬಜನಿ ಕಜೆ, ಅರ್ಚನಾ ರೈ ಸೇರಿದಂತೆ ಶಿವರಾಮ ರೈಯವರ ಬಂಧುಗಳು, ಆತ್ಮೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿವಕಿರಣ್ ಸಂಸ್ಥೆಯಲ್ಲಿ ಕಟ್ಟಡ ನಿರ್ಮಾಣ, ಕಟ್ಟಡ ಸಾಮಾಗ್ರಿಗಳು, ಬೋರ್ ವೆಲ್, ಜೆಸಿಬಿ, ಹಿಟಾಚಿ, ಟಿಪ್ಪರ್ ಮತ್ತು ಇನ್ನಿತರ ಸೇವೆಗಳನ್ನು ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.