ಶ್ರೀಕ್ಷೇತ್ರ ಧರ್ಮಸ್ಥಳದಿಂದ ಕೊರಪ್ಪಣೆ ಶ್ರೀ ದುರ್ಗಾ ದನ್ವಂತರಿ ಮಹಾವಿಷ್ಣು ದೇವಸ್ಥಾನಕ್ಕೆ 15 ಸಾವಿರ ಅನುದಾನ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಳ್ಪ ಗ್ರಾಮದ ಕೊರಪ್ಪಣೆ ಶ್ರೀ ದುರ್ಗಾದನ್ವಂತರಿ ಮಹಾವಿಷ್ಣು ದೇವಸ್ಥಾನಕ್ಕೆ ರೂ. 15 ಸಾವಿರ ಅನುದಾನ ಮಂಜೂರಾತಿ ಆಗಿದ್ದು, ಮಂಜೂರಾತಿ ಪತ್ರವನ್ನು ಶ್ರೀ ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್, ಸುಳ್ಯ ಇದರ ಯೋಜನಾಧಿಕಾರಿ ನಾಗೇಶ್ ಪಿ. ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಅಕ್ಕೆನಿಯವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರುಗಳಾದ ಚಿನ್ನಪ್ಪ ಪೂಜಾರಿ ಕೊರಪ್ಪಣೆ, ಮುರಳಿ ಭಟ್ ಕಲ್ಲೇರಿ, ಸುಬ್ರಹ್ಮಣ್ಯ ಭಟ್ ಕಲ್ಲೇರಿ, ಗಂಗಾಧರ ಕೊರಪ್ಪಣೆ, ಶ್ರೀಮತಿ ಜಯಶೀಲಾ ಭೋಜಪ್ಪ ಕುಳ, ಎಣ್ಣೆಮಜಲು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶೈಲಜಾ ಸದಾಶಿವ, ಒಕ್ಕೂಟದ ಉಪಾದ್ಯಕ್ಷ ಚಿದಾನಂದ ಕಲ್ಲೇರಿ, ವಲಯದ ಮೇಲ್ವಿಚಾರಕಿ ಶ್ರೀಮತಿ ಕಲಾವತಿ ಪಿ.ಬಿ, ಬಳ್ಪ ಗ್ರಾಮದ ಸೇವಾಪ್ರತಿನಿಧಿಯಾದ ಶ್ರೀಮತಿ ಭವ್ಯ ಅಚ್ಚುತ ಕಾಯಾರ, ಎಣ್ಣೆಮಜಲು ಒಕ್ಕೂಟದ ಪ್ರಗತಿಬಂಧು ಸ್ವ ಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.