ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಇಪ್ತಾರ್

0

ಬಡಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ಹಾಗೂ ರೋಗಿಗಳಿಗೆ ಸಹಾಯಧನ ಹಸ್ತಾಂತರ

ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವು ಪೈಚಾರ್ ಮಸೀದಿ ವಠಾರದಲ್ಲಿ ರಂಜಾನ್ ತಿಂಗಳ ಪೂರ್ತಿ ಇಪ್ತಾರ್ ಕೂಟ ಆಯೋಜಿಸಲಾಗಿದ್ದು ಅದರೊಂದಿಗೆ ಮಾ.14 ರಂದು ಬಡರೋಗಿಗಳಿಗೆ ಸಹಾಯಧನ ಹಸ್ತಾಂತರ ಹಾಗೂ ಬಡ ನಿರ್ಗತಿಕರಿಗೆ ರಂಜಾನ್ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.

ಅಲ್ ಅಮೀನ್ ಅಧ್ಯಕ್ಷರಾದ ಅಶ್ರಫ್ ಪೈಚಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಉದ್ಘಾಟನೆಯನ್ನು ಸಯ್ಯದ್ ಶಹೀರುಲ್ ಅಹ್ಡಲ್ ತಂಗಲ್ ವಿದ್ಯಾನಗರ ಕಾಸರಗೋಡು ನೆರವೇರಿಸಿದರು .
ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಶಮೀರ್ ಅಹ್ಮದ್ ನಈಮಿ ಉಸ್ತಾದ್ ಪ್ರಾಸ್ತಾವಿಕ ಮಾತುಗಳನ್ನಾಡಿ ದುವಾಶಿರ್ವಚನ ಮಾಡಿದರು.
ಈ ಸಂದರ್ಭದಲ್ಲಿ. ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಶರೀಫ್ ಟಿಎ, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರಾದ ಮುಜೀಬ್ ಪೈಚಾರ್ ,ಜುಮ್ಮಾ ಮಸೀದಿ ಕಾರ್ಯದರ್ಶಿ ಇಸಾಕ್ ಕೆಪಿ,ಸತ್ತಾರ್ ಬೇಬಿ ಶಾಪ್,
ಅಲ್ ಅಮೀನ್ ಯೂತ್ ಸೆಂಟರ್ ನ ಸದಸ್ಯರುಗಳು ಹಾಗೂ ಜಮಾಹತರು ಉಪಸ್ಥಿತರಿದ್ದರು