ಮಹೇಶ್ ಉಗ್ರಾಣಿಮನೆ ಹಾಗೂ ಹರೀಶ್ ಕುಮಾರ್ ಪುತ್ತೂರು ಪಾಲುದಾರಿಕೆಯ ಕಾಮಧೇನು ಟೂರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆ ಬೆಂಗಳೂರಿನಲ್ಲಿ ಶುಭಾರಂಭ

0

ಹಿಂದೂ ಜಾಗರಣಾ ವೇದಿಕೆಯ ಸುಳ್ಯ ತಾಲೂಕು ಸಂಚಾಲಕ ಹಾಗೂ ಮಂಡೆಕೋಲು ಗ್ರಾಮದ ಮಹೇಶ್ ಉಗ್ರಾಣಿಮನೆ ಹಾಗೂ ಪುತ್ತೂರಿನ ಹರೀಶ್ ರವರ ಪಾಲುದಾರಿಕೆಯಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿ ಕಾಮಧೇನು ಟೂರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆಯು ಶುಭಾರಂಭಗೊಂಡಿದೆ.

ಸಂಸ್ಥೆಯಲ್ಲಿ ಪೂಜಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇತ್ತೀಚೆಗೆ ಸಂಸ್ಥೆ ಲೋಕಾರ್ಪಣೆಗೊಂಡಿತು. ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತರು ಆಗಮಿಸಿ ಶುಭಹಾರೈಸಿದರು. ಸಂಸ್ಥೆಯ ಪಾಲುದಾರರಾದ ಮಹೇಶ್ ಉಗ್ರಾಣಿಮನೆ ಹರೀಶ್ ಪುತ್ತೂರು ಅತಿಥಿಗಳನ್ನು ಬರಮಾಡಿಕೊಂಡರು.


ದೇಶದ ಹಾಗೂ ವಿದೇಶಗಳ ಪುಣ್ಯ ಸ್ಥಳಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಪ್ಯಾಕೇಜ್ ಟೂರ್‌ಗಳನ್ನು ಇವರ ಈ ಸಂಸ್ಥೆ ಆಯೋಜಿಸುತ್ತಿದ್ದು, ೨೦೨೪ರ ಮೇ ತಿಂಗಳಲ್ಲಿ ಚಾರ್ ದಾಮ್ ಯಾತ್ರ, ಜೂನ್ ೩೦ರಂದು ಕಾಶ್ಮೀರ, ಅಮರನಾಥ, ವೈಷ್ಣೋದೇವಿ, ಅತ್ ಸರ್, ಜುಲೈ ತಿಮಗಳ ೨೨ ರಂದು ಪುರಿ ಜಗನ್ನಾಥ್, ಭುವನೇಶ್ವರ, ಕೊಲ್ಕತ್ತಾ, ಸುಂದರಬನ ಗಳಿಗೆ ಪ್ಯಾಕೇಜ್ ಟೂರ್ ನಿಗಧಿಯಾಗಿದೆ.