ಸುಬ್ರಹ್ಮಣ್ಯ: ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನಿಂದ ಸ್ವಚ್ಛತಾ ಕಾರ್ಯಕ್ರಮ

0
             ಸುಬ್ರಹ್ಮಣ್ಯದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನವರು ಕುಮಾರಧಾರ ಮತ್ತು ಪರ್ವತಮುಖಿ ಭಾಗದಲ್ಲಿ ಮುಖ್ಯರಸ್ತೆಯ ಎರಡು ಬದಿಗಳಲ್ಲಿ  ಸುತ್ತಮುತ್ತಲಿನ ಪರಿಸರದಲ್ಲಿ ಇದ್ದಂತಹ ಕಸ ಕಡ್ಡಿಗಳು ಪ್ಲಾಸ್ಟಿಕ್ ಬಾಟ್ಲಿಗಳು ಪ್ಲಾಸ್ಟಿಕ್ ಚೀಲ ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನ ಹೆಕ್ಕಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾ.31 ಕೈಗೊಂಡರು. ಹೆಚ್ಚಾಗಿ ದೂರ ದೂರಗಳಿಂದ ಬಂದ ಭಕ್ತಾದಿಗಳೇ ಕಚ್ಚಾ ವಸ್ತುಗಳನ್ನ ಎಸೆದಿರುವುದು ಗಮನಕ್ಕೆ ಮಂದಿರುತ್ತದೆ.


 ಪ್ರತಿ ವಾರದ ಆದಿತ್ಯವಾರ ರವಿ ತಕ್ಕೆಪದ ಸಮಾಜ ಸೇವಾ ಟ್ರಸ್ಟ್ ರವರು ಡಾಕ್ಟರ್ ರವಿಕಕ್ಕೆ ಪದವು ಅವರ ಮಾರ್ಗದರ್ಶನದಲ್ಲಿ ಕುಕ್ಕೆ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸುತ್ತಾ ಬರುತಿದ್ದಾರೆ.