ಹರಿಹರ ಪಲ್ಲತ್ತಡ್ಕದಲ್ಲಿ ಪರಿಹಾರಿಣಿ ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ಉದ್ಘಾಟನೆ

0

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಏಳು ದಿನಗಳ ಪರಿಹಾರಿಣಿ ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರವನ್ನು ಸಹಕಾರಿ ಸಂಘದ ನಿರ್ದೇಶಕರಾದ ವಿನುಪ್ ಮಲ್ಲಾರ ರವರು ಉದ್ಘಾಟಿಸಿದರು. ವೇದಿಕೆಯಲ್ಲಿ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ನಿರ್ದೇಶಕರುಗಳಾದ ವಿಜಯ.ಕೆ.ಎಸ್ ಮತ್ತು ವಿಜಯ.ಕೆ.ಜೆ.ಯವರು ಹಾಗೂ ಆಯೋಜಕರಾದ ಲೋಕೇಶ ಪೀರನಮನೆ, ಚಿಕಿತ್ಸಕರಾದ ಚಂದನ್ ಶಿವಮೊಗ್ಗ ಮತ್ತು ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಲೋಕೇಶ ಪೀರನಮನೆಯವರು ಶಿಬಿರದ ಮಾಹಿತಿ ನೀಡಿದರು.

ಅನಂತರಾಮ ಮಣಿಯಾನರವರು ಸ್ವಾಗತಿಸಿ ಸಾರ್ವಜನಿಕರು ಅಕ್ಯುಪ್ರೆಶರ್ ಚಿಕಿತ್ಸೆಯ ಉಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಏಪ್ರಿಲ್ 10 ತನಕ ಚಿಕಿತ್ಸಾ ಶಿಬಿರ ನಡೆಯಲಿದೆ.