ಪಿ.ಯು.ಸಿ ಫಲಿತಾಂಶ: ಪ್ರದೀಪ್ ಟಿ. ಡಿಸ್ಟಿಂಕ್ಷನ್

0

ಪಿ.ಯು.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಾಳಿಲ ಗ್ರಾಮದ ತೋಟ ನಿವಾಸಿ ಪ್ರದೀಪ್ ಟಿ 574 (95.5%) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ. ಇವರು ಬೆಳ್ಳಾರೆಯ ಹೊಟೇಲ್ ಪವಿತ್ರ ಇದರ ಮಾಲಕರಾದ ಸದಾನಂದ ಪೂಜಾರಿ ಮತ್ತು ದೇವಕಿ(ಪ್ರೇಮ) ದಂಪತಿಯ ಪುತ್ರ. ಇವರು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದರು