ಬೊಳಿಯಮಜಲು: ಶ್ರೀ ಶಿರಾಡಿ ರಾಜನ್ ಹಾಗೂ ಗುಳಿಗ ದೈವದ ನೇಮೋತ್ಸವ

0

ಸುಳ್ಯದ ಬೊಳಿಯಮಜಲಿನಲ್ಲಿರುವ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಶ್ರೀ ಶಿರಾಡಿ ರಾಜನ್ ದೈವ ಹಾಗೂ ಗುಳಿಗ ದೈವದ ನೇಮೋತ್ಸವವು ಎ.9 ಮತ್ತು 10ರಂದು ನಡೆಯಿತು.

ಎ.9ರಂದು ಬೆಳಿಗ್ಗೆ ಶ್ರೀ ಶಿರಾಡಿ ರಾಜನ್ ದೈವಗಳ ಪ್ರತಿಷ್ಠಾ ದಿನದ ಪ್ರಯುಕ್ತ ಗಣಪತಿ ಹವನ, ಶುದ್ಧೀಕಲಶ, ರಾತ್ರಿ ಭಂಡಾರ ಇಳಿಯುವುದು ಜರುಗಿತು.

ಎ.10ರಂದು ಬೆಳಿಗ್ಗೆ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ ಶ್ರೀ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ ಜರುಗಿತು.


ಈ ಸಂದರ್ಭದಲ್ಲಿ ದೈವಸ್ಥಾನದ ಗೌರವಾಧ್ಯಕ್ಷ ಮೋನಪ್ಪ ಗೌಡ ಅಡ್ಕಬಳೆ, ಸ್ಥಾಪಕ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಸ್ಥಳ ಮೊಕ್ತೇಸರ ಶ್ರೀಮತಿ ಚಂದ್ರಾವತಿ ನಾರಾಯಣ ಕಜೆ, ಪ್ರಧಾನ ಕಾರ್ಯದರ್ಶಿ ಮಾದವ ಜಟ್ಟಿಪಳ್ಳ, ಕೋಶಾಧಿಕಾರಿ ಪರಮೇಶ್ವರ ಬಿ.ಕೆ., ಅಧ್ಯಕ್ಷ ಕುಲದೀಪ್ ಪೆಲ್ತಡ್ಕ, ಕಾರ್ಯದರ್ಶಿ ಜಗದೀಶ್ ಪೂಜಾರಿ ಕೊಡಿಯಾಲಬೈಲು, ಉತ್ಸವ ಸಮಿತಿಯ ಅಧ್ಯಕ್ಷ ದೇವರಾಜ್ ಕುದ್ಪಾಜೆ, ಉತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಬುದ್ಧನಾಯ್ಕ್ ಮತ್ತು ಗೋಪಾಲ ಬಳ್ಳಡ್ಕ, ಉತ್ಸವ ಸಮಿತಿ ಜೊತೆ ಕಾರ್ಯದರ್ಶಿ ಶಂಕರ ಪಾಂಡಿ, ಉತ್ಸವ ಸಮಿತಿ ಕೋಶಾಧಿಕಾರಿ ಹೂವಪ್ಪ ಬಂಗಾರಕೋಡಿ ಸೇರಿದಂತೆ ಸಮಿತಿಯ ಗೌರವ ಸಲಹೆಗಾರರುಗಳು , ವಿವಿಧ ಸಮಿತಿಯ ಸಂಚಾಲಕರುಗಳು ಹಾಗೂ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.