ಬೆಳ್ಳಾರೆ ಶಂಸುಲ್ ಉಲಮಾ ಟ್ರಸ್ಟ್ ವತಿಯಿಂದ ಸಾಮೂಹಿಕ ಸುನ್ನತ್ ಕಾರ್ಯಕ್ರಮ

0


ಶಂಶುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಇದರ ವತಿಯಿಂದ ಸಾಮೂಹಿಕ ಸುನ್ನತ್ ಕಾರ್ಯಕ್ರಮ ನಡೆಯಿತು .
ಕಾರ್ಯಕ್ರಮ ಉದ್ಘಾಟನೆಯನ್ನು ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿ ಅಧ್ಯಕ ಯು ಹೆಚ್ ಅಬೂಭಕ್ಕರ್ ಹಾಜಿ ಮಂಗಳ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್‌ ಖಾದರ್ ಬಾಯಂಬಾಡಿ ವಹಿಸಿದರು.
ಸಂಸ್ಥೆಯ ಕಾರ್ಯದರ್ಶಿ ಜಮಾಲ್ ಕೆ.ಎಸ್,ಜಮಾಯತ್ ಕಮಿಟಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್,ಕೋಶಾಧಿಕಾರಿ ನಾಶೀರ್ ಬಿಝ್,ಉಪಸ್ಥಿತರಿದ್ದರು.
ಯು.ಬಿ ಬಶೀರ್ ಸ್ವಾಗತಿಸಿ ಅಜರುದ್ದೀನ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 40 ಮಕ್ಕಳ ಸಾಮೂಹಿಕ ಸುನ್ನತ್ ಮಾಡಲಾಯಿತು.