ಬಳ್ಳಮಜಲುಗುತ್ತು ಬೋಳೋಡಿ ದಿ. ಜಯರಾಮ ಆಳ್ವ ವೈಕುಂಠ ಸಮಾರಾಧನೆ – ನುಡಿನಮನ ಸಲ್ಲಿಕೆ

0

ಸುಳ್ಯದ ಪ್ರಪ್ರಥಮ ಬಾರ್ ಆ್ಯಂಡ್ ರೆಸ್ಟೋರೆಂಟ್ ರಾಜೇಶ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ರಾಜೇಶ್ ಪೆಟ್ರೋಲ್ ಪಂಪ್ ಮಾಲಕರಾದ ಐವರ್ನಾಡಿನ ಪ್ರಗತಿಪರ ಕೃಷಿಕ , ಹಿರಿಯ ಉದ್ಯಮಿ ಬಳ್ಳಮಜಲುಗುತ್ತು ಬೋಳೋಡಿ ಜಯರಾಮ ಆಳ್ವ ಅವರು ಅಸೌಖ್ಯದಿಂದಾಗಿ ಎ.10ರಂದು ನಿಧನರಾಗಿದ್ದು, ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಸುಳ್ಯದ ಕೇರ್ಪಳ ಬಂಟರ ಭವನದಲ್ಲಿ ಎ.21ರಂದು ಜರುಗಿತು.

ನಿವೃತ್ತ ವಿಜಯ ಬ್ಯಾಂಕ್ ಉದ್ಯೋಗಿ ಮನೋಹರ ಆಳ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಮಾಜಿಕ ಧುರೀಣ ಲಯನ್ಸ್ ಮಾಜಿ ಗವರ್ನರ್ ಎಂ.ಬಿ. ಸದಾಶಿವ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಕಡಮಜಲು ಸುಭಾಷ್ ರೈ ಅವರು ಜಯರಾಮ ಆಳ್ವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ವೇದಾವತಿ ಜೆ. ಆಳ್ವ, ಪುತ್ರರಾದ ದೇವರಾಜ್ ಆಳ್ವ, ಗಣೇಶ್ ಆಳ್ವ, ಸೊಸೆಯಂದಿರಾದ ಮಮತ ದೇವರಾಜ್ ಆಳ್ವ, ಸೀಮಾ ಗಣೇಶ್ ಆಳ್ವ, ಮೊಮ್ಮಕ್ಕಳಾದ ತ್ರಿಷಾ ಆಳ್ವ, ರಿತಿ ಆಳ್ವ ಸೇರಿದಂತೆ ಬಳ್ಳಮಜಲುಗುತ್ತು ಬೋಳೋಡಿ ಕುಟುಂಬಸ್ಥರು ಸೇರಿದಂತೆ, ಊರವರು, ಹಿತೈಷಿಗಳು, ರಾಜೇಶ್ ಗ್ರೂಫ್ಸ್ ನೌಕರ ವೃಂದದವರು ಉಪಸ್ಥಿತರಿದ್ದರು.