ಸುನ್ನೀ ಮೇನೇಜ್ಮೆಂಟ್ ಅಸೋಶಿಯೇಶನ್ ಕೇರಳ ರಾಜ್ಯ ಕಾರ್ಯದರ್ಶಿ, ಖಾದಿಸಿಯ್ಯಾ ಕೊಲ್ಲಂ ಸಾರಥಿ ಡಾ| ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಕಲ್ಲುಗುಂಡಿ ಸುನ್ನೀ ಸೆಂಟರ್ ಭೇಟಿ

0

ಸುನ್ನೀ ಮೇನೇಜ್ಮೆಂಟ್ ಅಸೋಶಿಯೇಶನ್ ಕೇರಳ ರಾಜ್ಯ ಕಾರ್ಯದರ್ಶಿ, ಖಾದಿಸಿಯ್ಯಾ ಕೊಲ್ಲಂ ಸಾರಥಿ, ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯರೂ ಆದ ಡಾ| ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಕಲ್ಲುಗುಂಡಿ ಸುನ್ನೀ ಸೆಂಟರ್ ಗೆ ಭೇಟಿ ನೀಡಿ ದುಆಶೀರ್ವಚನಗೈದರು.

ನಂತರ ಮಾತನಾಡಿದ ಅವರು ಸುನ್ನೀ ಸಂಘ ಕುಟುಂಬಗಳ ಈ ದೊಡ್ಡ ಜಾಲವು ಹಲವಾರು ವಿಶೇಷತೆಗಳನ್ನು ಹೊಂದಿದ್ದು, ಕಷ್ಟಗಳಲ್ಲಿ ಸಿಲುಕಿದವರಿಗೆ ಆಸರೆಯಾಗುವ ಮೂಲಕ, ನೊಂದವರಿಗೆ ನೆರವಾಗುವ ಮೂಲಕ ಜನಮೆಚ್ಚುಗೆ ಪಡೆದ ಸಂಘಟನೆಯಾಗಿದೆ ಎಂದು ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕೊಲ್ಲಂ ಖಾದಿಸಿಯ್ಯಾ ಸಂಸ್ಥೆಯ ಮುದರ್ರಿಸ್, ಫಾರೂಕ್ ನಈಮಿ ನೇತೃತ್ವದ ಐವ ಫೌಂಡೇಶನ್ ನಾಯಕರು ಹಾಗೂ ಎಸ್ಸೆಸ್ಸೆಫ್, ಎಸ್ ವೈ ಎಸ್ ಕಲ್ಲುಗುಂಡಿ ಯೂನಿಟ್ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಸ್ತುತ ಸುನ್ನೀ ಸೆಂಟರ್ ಹಲವಾರು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿ ಕಾರ್ಯಾಚರಿಸುತ್ತಿದೆ.