ಕಲ್ಲುಗುಂಡಿ : ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಶುಭಾರಂಭ

0

ಕಲ್ಲುಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟೀಲು ಮೇಳದ ಯಕ್ಷಗಾನ ನಾಟ್ಯ ಕಲಾವಿದ ಯಕ್ಷಗುರು ರಾಧಾಕೃಷ್ಣ ಕಲ್ಲುಗುಂಡಿ ನೇತೃತ್ವದ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಮೇ 12 ರಂದು ಶುಭಾರಗೊಂಡಿತು.

ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಹಿರಿಯ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿನಯ ಕುಮಾರ್ ಬಾಚಿಗದ್ದೆ, ರಕ್ಷಿತ್ , ಹರೀಶ್ ದುಗ್ಗಳ, ಮೋಹನ್ ಆಚಾರ್ಯ, ಅತೀಶ ಪೇರಾಲು ಮತ್ತು ಯಕ್ಷಗಾನ ತರಬೇತಿ ಪಡೆದುಕೊಳ್ಳುವವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಾಗೂ ದಾಖಲಾತಿ ಆರಂಭಗೊಂಡಿದ್ದು ಆಸಕ್ತಿ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಬಹುದು ಎಂದು ಯಕ್ಷಗಾನ ಕಲಾವಿದ ಯಕ್ಷಗುರು ರಾಧಾಕೃಷ್ಣ ಕಲ್ಲುಗುಂಡಿ ತಿಳಿಸಿದ್ದಾರೆ.