ಕಾಂಕ್ರೀಟೀಕರಣಕ್ಕಾಗಿ ರಸ್ತೆ ಅಗೆತ

0

ಮಳೆಯಿಂದ ತೋಡಾದ ಕೊಡಿಯಾಲಬೈಲ್- ನೀರಬಿದಿರೆ ರಸ್ತೆ: ಸಂಚಾರ ದುಸ್ಥರ

ಕಾಂಕ್ರೀಟೀಕರಣಕ್ಕಾಗಿ ರಸ್ತೆ ಅಗೆದುದರಿಂದ ಕೊಡಿಯಾಲಬೈಲ್- ನೀರಬಿದಿರೆ ರಸ್ತೆ ನಿನ್ನೆ ಸುರಿದ ಭಾರಿ ಮಳೆಗೆ ಪೂರ್ತಿ ನೀರು ದುಂಬಿ, ಕೆಸರುಮಯವಾಗಿದೆ.
ರಸ್ತೆ ಕಾಂಕ್ರೀಟೀಕರಣಕ್ಕಾಗಿ ಈ ರಸ್ತೆಯ ಕುದ್ಪಾಜೆ, ಕೊಡಿಯಾಲಬೈಲ್ ಭಾಗದಲ್ಲಿ ಸುಮಾರು ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಜೆಸಿಬಿ ಮೂಲಕ ಅಗೆಯಲಾಗಿತ್ತು. ನಿನ್ನೆ ಮತ್ತು ಇವತ್ತು ಬೆಳಿಗ್ಗೆ ಸುರಿದ ಭಾರೀ ಮಳೆಗೆ ರಸ್ತೆಯ ಅಲ್ಲಲ್ಲಿ ನೀರು ತುಂಬಿದೆ ಮತ್ತು ಕೆಸರುಮಯವಾಗಿ ವಾಹನ ಸಂಚಾರ ಕಷ್ಟವಾಗಿದೆ.

ಕಾಂಕ್ರೀಟ್ ಮಾಡಿದ ಕಡೆಗಳಲ್ಲಿ ಮಳೆಗೆ ಮಣ್ಣು ಕೊಚ್ಚಿ ಹೋಗುತ್ತಿದ್ದು, ವಾಹನ ಪ್ರಯಾಣಿಕರು ಮುನ್ನಚ್ಚರಿಕೆ ವಹಿಸಬೇಕಾಗಿದೆ.