ಕಲ್ಮಡ್ಕದ ಬೊಮ್ಮೆಟ್ಟಿಯಲ್ಲಿ ರಮೇಶ್ ಕಾಚಿಲ‌ರವರಿಂದ‌ ಚರಂಡಿ ದುರಸ್ತಿ

0

ಪಾಜಪಳ್ಳದಿಂದ ಕಲ್ಮಡ್ಕಕ್ಕೆ ಇರುವ ಸಂಪರ್ಕ ರಸ್ತೆಯ ಬೊಮ್ಮೆಟ್ಟಿ ಎಂಬಲ್ಲಿ ಸುಮಾರು ವರ್ಷಗಳಿಂದ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿದ್ದುದರಿಂದ ಮಳೆನೀರು ರಸ್ತೆಯಲ್ಲಿಯೇ ಹರಿದು ರಸ್ತೆ ಹದಗೆಡುತ್ತಿತ್ತು.

ಈ ಸಮಸ್ಯೆಯ‌ ಬಗ್ಗೆ ಸ್ಥಳೀಯರಾದ ರಮೇಶ್ ಕಾಚಿಲ ರು ಸಂಬಂದಪಟ್ಟವರ ಗಮನಕ್ಕೆ ತಂದಿದ್ದರೂ ಚರಂಡಿ ದುರಸ್ತಿಗೊಳಿಸುವ ಯಾವುದೇ ಸ್ಪಂದಸಿರಲಿಲ್ಲ. ಇದೀಗ ಅವರೇ ಚರಂಡಿ ದುರಸ್ತಿಗೊಳಿದ್ದಾರೆ.


ಪ್ರತಿ ಮಳೆಗಾಲದಲ್ಲೂ ಇಲ್ಲಿಸುಮಾರು ನೂರು ಮೀಟರ್ ಮೇಲೆಯಿಂದ ಮಳೆನೀರು ರಸ್ತೆಯಲ್ಲಿಯೇ ಹರಿದು ಬರುತ್ತಿದ್ದೆ.


ಕಳೆದ ವರ್ಷ ಮಳೆಗಾಲದಲ್ಲಿ ಇಲ್ಲಿರುವ ಸಣ್ಣ ತೊರೆಯೊಂದರಲ್ಲಿ ನೀರು ಉಕ್ಕಿ ರಸ್ತೆಯಲ್ಲಿ ಹರಿದು ರಸ್ತೆ ಮಧ್ಯದಲ್ಲಿ ಹೊಂಡವೊಂದು ಅಪಾಯಕಾರಿ ರೀತಿಯಲ್ಲಿ ನಿರ್ಮಾಣವಾಗಿತ್ತು. ಇಷ್ಟೆಲ್ಲಾ ಅಪಾಯಗಳು ಬರುವ ಸಾಧ್ಯತೆಯಿದ್ದರೂ ಸಂಬಂಧಪಟ್ಟವರು ಚರಂಡಿ ರಿಪೇರಿ ಮಾಡದೇ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿತ್ತು.