ಸುಬ್ರಹ್ಮಣ್ಯದಲ್ಲಿ ಮರ ಉರುಳಿ ಬಿದ್ದು ಮಹಿಳೆ ಮೃತ್ಯು

0

ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದ ಬಸವನ ಮೂಲೆ ಎಂಬಲ್ಲಿ ಇಂದು ಸಂಜೆ ಗಾಳಿ ಮಳೆಗೆ ಮರ ಬಿದ್ದು ಓರ್ವ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ಬಸವನ ಮೂಲೆಯ ಮೀನಾಕ್ಷಿ ಎಂಬಾಕೆ ಮೃತಪಟ್ಟವರು. ತೋಟದಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಬಿಚ್ಚಿಸಲು ಹೋಗಿದ್ದಾಗ ಗಾಳಿಗೆ ಉಪ್ಪಳಿಕೆ ಮರ ಬಿದ್ದು ಅದರಡಿ ಸಿಲುಕಿ ಗಾಯಗೊಂಡ ಮಹಿಳೆ ಮೃತಪಟ್ಟರೆಂದು ತಿಳಿದುಬಂದಿದೆ.