ಬೂಡು ದೈವಸ್ಥಾನಕ್ಕೆ ಬಿಜೆಪಿಯಿಂದ ದೇಣಿಗೆ

0

ಬೂಡು ಕಾಲೋನಿಯ ದೇವಸ್ಥಾನಕ್ಕೆ ಬೂಡು ಕೆರೆಮೂಲೆ ಬಿಜೆಪಿ ಬೂತ್ ಸಮಿತಿಯಿಂದ ರೂ 10,000 ವನ್ನು ದೇಣಿಗೆಯಾಗಿ ನೀಡಲಾಯಿತು.
ಬೂತ್ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡು ನಗರ ಸಮಿತಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ್ ರವರು ಮಾತನಾಡಿ, ಹಿಂದೂ ಧರ್ಮದ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿಕೊಳ್ಳಲು ಬಿಜೆಪಿ ಸದಾ ನಮ್ಮೊಂದಿಗೆ ಇದೆ ಎಂದರು.

ಅಧಿವಕ್ತ ಪರಿಷತ್ ನ ಅಧ್ಯಕ್ಷ ವಕೀಲರಾದ ಹರೀಶ್ ಬುಡುಪನ್ನೆ, ಬಿಜೆಪಿ ಬೂತ್ ಪ್ರಮುಖರಾದ ಲೋಕೇಶ್ ಕೆರೆಮೂಲೆ, ಜಗದೀಶ್ ಕೆರೆಮೂಲೆ ಉಪಸ್ಥಿತರಿದ್ದರು.