ಕುರುಂಜಿ ಕುಟುಂಬದ ಹಿರಿಯರಾದ ಕುರುಂಜಿ ಪದ್ಮಯ ಗೌಡರಿಗೆ ಶ್ರದ್ಧಾಂಜಲಿ ಹಾಗೂ ವೈಕುಂಠ ಸಮಾರಾಧನೆ

0

ಕುರುಂಜಿ ಕುಟುಂಬದ ಹಿರಿಯರಾದ ಕುರುಂಜಿ ಪದ್ಮಯ ಗೌಡರು ಮೇ 15, 2024 ರಂದು ದೈವಾಧೀನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮ ಮೇ 26ರಂದು ಅವರ ಸ್ವಗೃಹವಾದ ಕುರುಂಜಿ- ಬಿಳಿಯಾರಿನಲ್ಲಿ ನಡೆಯಿತು.

ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇಲ್ಲಿಯ ನಿವೃತ್ತ ಪ್ರಾಂಶುಪಾಲರಾದ ಕೆ ಆರ್ ಗಂಗಾಧರ್ ನುಡಿ ನಮನ ಸಲ್ಲಿಸಿದರು. ಆಗಮಿಸಿದ ಸರ್ವ ಬಂಧುಗಳು ಕುರುಂಜಿ ಪದ್ಮಯ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಚಂದ್ರಶೇಖರ ಬಿಳಿನೆಲೆ ನಿರೂಪಿಸಿದರು.

ಈ ಸಂದರ್ಭದಲ್ಲಿ ಮೃತರ ಮಕ್ಕಳಾದ ಕುಸುಮಾದರ ಕೆ. ಪಿ, ಪ್ರೇಮಲತಾ, ವಸಂತಿ, ಸುಲೋಚನ, ಡಾ. ಅನುರಾಧಾ ಕುರುಂಜಿ, ಅಳಿಯಂದಿರು, ಮೊಮ್ಮಕ್ಕಳು, ಹಾಗೂ ಮೃತರ ಸಹೋದರ – ಸಹೋದರಿಯರು, ಕುಟುಂಬಸ್ಥರು, ಊರವರು, ಬಂಧು -ಮಿತ್ರರು ಉಪಸ್ಥಿತರಿದ್ದರು.