ಉಬರಡ್ಕ ಮಿತ್ತೂರು ಶಾಲೆಗೆ ಪುಸ್ತಕ ವಿತರಣೆ

0

ಸೌಜನ್ಯ ಹೋರಾಟ ಸಮಿತಿ ಉಬರಡ್ಕ ಇದರ ವತಿಯಿಂದ ರವಿರಾಜ್ ಕಂಬಳಿಮೂಲೆ, ಶುಭಕರ ನಾಯಕ್, ರಾಜೇಶ್ ಭಟ್, ಜನಾರ್ಧನ ಪೂಜಾರಿ, ಪ್ರಕಾಶ್, ಪುರುಷೋತ್ತಮ, ಸತೀಶ್, ಜಯಪ್ರಕಾಶ್, ಲೊಕೇಶ್ ಇವರು ಸೇರಿ ಹಣ ಸಂಗ್ರಹಿಸಿ ಸ.ಹಿ.ಪ್ರಾ ಶಾಲೆ ಉಬರಡ್ಕ ಮಿತ್ತೂರು ಇಲ್ಲಿಯ ವಿದ್ಯಾರ್ಥಿಗಳಿಗೆ 370 ಬರೆಯುವ ಪುಸ್ತಕವನ್ನು ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಹೇಮಾವತಿಯವರ ಮುಖಾಂತರ ಜೂ.3 ರಂದು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಶ್ರೀಮತಿ ಧನಲಕ್ಷ್ಮೀ, ರವಿರಾಜ್ ಕಂಬಳಿಮೂಲೆ, ಶುಭಕರ ನಾಯಕ್, ಶಾಲಾ ಎಸ್.ಡಿ.ಎಂ.ಸಿ ಸದಸ್ಯರಾದ ಜಯರಾಮ, ಸತೀಶ, ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.