ಮುರುಳ್ಯ ಶಾಂತಿನಗರ ಶಾಲಾ ಮಂತ್ರಿಮಂಡಲ ರಚನೆ : ಮುಖ್ಯ ಮಂತ್ರಿಯಾಗಿ ತನ್ವಿ, ಸೋವಿತ್ ಉಪಮುಖ್ಯಮಂತ್ರಿ

0

ಸಹಿಪ್ರಾ ಶಾಲೆ ಮುರಳ್ಯ ಶಾಂತಿನಗರದ ಮಂತ್ರಿಮಂಡಲ ರಚನೆ ಮುಖ್ಯ ಶಿಕ್ಷಕಿ ಸೀತಾ ವಿಯವರ ಉಸ್ತುವಾರಿಯಲ್ಲಿ ನಡೆಯಿತು.
ಮುಖ್ಯಮಂತ್ರಿಯಾಗಿ 7ನೇ ತರಗತಿಯ ತನ್ವಿ ಕೆ.ಜೆ, ಮತ್ತು ಉಪಮುಖ್ಯಮಂತ್ರಿಯಾಗಿ 7ನೇ ತರಗತಿಯ ಸೋವಿತ್ ಆಯ್ಕೆಯಾದರು. ಸಹ ಶಿಕ್ಷಕರ ಸಮಕ್ಷಮದಲ್ಲಿ ವಿವಿಧ ಖಾತೆಗಳ ಹಂಚಿಕೆ ಮಾಡಲಾಯಿತು.


1ನೇ ತರಗತಿಯಿಂದ 7ನೇ ತರಗತಿಯವರೆಗೆ ಮತದಾನದ ಮೂಲಕ ಮಂತ್ರಿಗಳ ಆಯ್ಕೆ ನಡೆಯಿತು. ಮುಖ್ಯ ಶಿಕ್ಷಕರು ಮುಖ್ಯಮಂತ್ರಿ ಹಾಗೂ ವಿವಿಧ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿ ಖಾತೆಗಳ ಜವಾದ್ದಾರಿ, ಕರ್ತವ್ಯಗಳ ಬಗ್ಗೆ ವಿವರಿಸಿದರು.