ಜಾಲ್ಸೂರು : ವಿಶ್ವ ತಂಬಾಕು ವಿರೋಧಿ ದಿನಾಚರಣೆ

0

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ. ) ಸುಳ್ಯ ತಾಲೂಕು ಯೋಜನೆಯ ಕಾರ್ಯಕ್ರಮದಡಿಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ತರಬೇತಿ ಕಾರ್ಯಕ್ರಮವು ಅಡ್ಕಾರು ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಜಾಲ್ಸೂರು ಗೇಟ್ ಒಕ್ಕೂಟದ ಸದಸ್ಯರುಗಳಿಗೆ, ಜಾಲ್ಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಶ್ರೀಮತಿ ಡಾ. ರಚನಾರವರು ಸದಸ್ಯರುಗಳಿಗೆ ದುಶ್ಚಟದಿಂದ ದೂರವಿರುವಂತೆ ಕರೆ ನೀಡಿದರು.


ಬಳಿಕ ತಂಬಾಕು ಸೇವನೆಯಿಂದ ಬರುವ ಕಾಯಿಲೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಾಲ್ಸುರು ವಲಯಾಧ್ಯಕ್ಷ ರವಿ ಅಡ್ಕಾರು, ಉಪಾಧ್ಯಕ್ಷರುಗಳಾದ ಶ್ರೀಮತಿ ನಳಿನಿ ಶಿವಾನಂದ, ಕಾರ್ಯದರ್ಶಿ ಶ್ರೀಮತಿ ಮಮತ ಕೋಶಾಧಿಕಾರಿ ವಾಸುದೇವ ಮತ್ತು ಜಾಲ್ಸೂರು ಗೇಟ್ ಒಕ್ಕೂಟ ಸದಸ್ಯರುಗಳು ಉಪಸ್ಥಿತರಿದ್ದರು.


ಜಾಲ್ಸುರು ವಲಯದ ಮೇಲ್ವಿಚಾರಕ ತೀರ್ಥರಾಮಾವರು ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.
ಸೇವಾಪ್ರತಿನಿಧಿ ಬಾಲಕೃಷ್ಣ ಅಡ್ಕಾರು ಸ್ವಾಗತಿಸಿ, ವಂದಿಸಿದರು.