ಎಸ್ಸೆಸ್ಸೆಫ್ ಗೂನಡ್ಕ ಶಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ

0

ಎಸ್ಸೆಸ್ಸೆಫ್ ಗೂನಡ್ಕ ಶಾಖೆ ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಶಿಬಿರವು ಜೂ 9 ರಂದು ಗೂನಡ್ಕ ಮದ್ರಸ ಸಭಾಂಗಣದಲ್ಲಿ ಶಾಖಾಧ್ಯಕ್ಷರಾದ ಇಸಾಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಖ್ಯಾತ ತರಬೇತುದಾರರಾದ ನಾಸಿರ್ ಮಾಸ್ಟರ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದರು. ಗೂನಡ್ಕ ಸದರ್ ಉಸ್ತಾದ್ ಲತೀಫ್ ಸಖಾಫಿಯವರ ದುಆ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಗೂನಡ್ಕ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಉದ್ಘಾಟಿಸಿ, ಗೂನಡ್ಕ ಖತೀಬರಾದ ಅಬೂಬಕರ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅತಿಥಿಗಳಾಗಿ ಮುಸ್ಲಿಂ ಜಮಾಅತ್ ಸುಳ್ಯ ಸರ್ಕಲ್ ಅಧ್ಯಕ್ಷರಾದ ಉಮರ್ ಹಾಜಿ ಪಿ ಎ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಬೂಸಾಲಿ ಪಿ ಕೆ, ಎಸ್ ವೈ ಎಸ್ ಸುಳ್ಯ ಸರ್ಕಲ್ ಅಧ್ಯಕ್ಷರಾದ ಲತೀಫ್ ಸಖಾಫಿ, ಗೂನಡ್ಕಎಸ್ ವೈ ಎಸ್ ಅಧ್ಯಕ್ಷರಾದ ಹನೀಫ್ ಝೈನಿ, ಕಾರ್ಯದರ್ಶಿ ಹಾರಿಸ್ ಕೆ ಎಸ್, , ಝೋನ್ ಸದಸ್ಯರಾದ ಸಿದ್ದೀಕ್ ಗೂನಡ್ಕ, ಅಲ್ ಅಮೀನ್ ಅಧ್ಯಕ್ಷರಾದ ಸಾದಿಕ್ ಕುಂಭಕ್ಕೋಡು, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್ ಮತ್ತು ಎಸ್ಸೆಸ್ಸೆಫ್ ಕಲ್ಲುಗುಂಡಿ ಶಾಖೆ ಅಧ್ಯಕ್ಷರಾದ ಆಶಿಕ್ ಕೆ ಹೆಚ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಉಫೈಫ್ ಸ್ವಾಗತಿಸಿ ವಂದಿಸಿದರು.