ಏನೆಕಲ್ಲು: ಸಂಕಡ್ಕ- ಹೊಸಮನೆ ಬೈಲಿನವರಿಂದ ಶ್ರಮದಾನದ ಮೂಲಕ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲುಗಳ ತೆರವು

0

ಏನೆಕಲ್ಲು ಗ್ರಾಮದ ಸಂಕಡ್ಕ, ಹೊಸಮನೆ ಬೈಲಿನವರಿಂದ ಶ್ರಮದಾನದ ಮೂಲಕ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲುಗಳ ತೆರವು ಕಾರ್ಯ ಜೂ. 9ರಂದು ನಡೆಯಿತು.

ಇದೇ ಸಂದರ್ಭದಲ್ಲಿ ರಸ್ತೆ ದುರಸ್ತಿ ಕಾರ್ಯವನ್ನೂ ಮಾಡಲಾಯಿತು. ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಈ ಬೈಲಿನ ನಾಗರಿಕರು ಸ್ವ ಇಚ್ಛೆಯಿಂದ ಮುಂದೆ ಬಂದು ರಸ್ತೆ ದುರಸ್ತಿ ಮತ್ತು ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲುಗಳನ್ನು ಕಡಿಯುವ ಕೆಲಸ ಮಾಡುತ್ತಿದ್ದು, ಊರಿಗೆ ಮಾದರಿಯಾಗಿದ್ದಾರೆ.

ಮೆಸ್ಕಾಂ ಲೈನ್ ಮ್ಯಾನ್ ಉಮೇಶ ನೇತೃತ್ವ ವಹಿಸಿದ್ದರು. ಶ್ರಮದಾನದಲ್ಲಿ ದುರ್ಗಪ್ರಸಾದ್, ದೇರಾಪ್ಪಗೌಡ,‌ ಗುರುಪ್ರಸಾದ್, ಅಭಿನಂದನ್, ಅಕ್ಷಿತ್, ವಾಡ್ಯಪ್ಪ ಗೌಡ, ಶೇಖರ ಗೌಡ, ರಮೇಶ ಗೌಡ, ನಾಗಪ್ಪ ಗೌಡ, ಬಾಲಕೃಷ್ಣ, ನರೇಂದ್ರ, ಕುಸುಮಾಧರ, ಚಿದಾನಂದ ಮತ್ತು ಮಾಲಿನಿ ಯವರು ಬಾಗವಹಿಸಿದ್ದರು.