ಕಲ್ಕುಡ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಪ್ರಯುಕ್ತ ತಂಬಿಲ ಸೇವೆ

0

ಸುಳ್ಯ ಗಾಂಧಿನಗರ ಕಾರಣಿಕ ಕ್ಷೇತ್ರ ಶ್ರೀ ಕಲ್ಕುಡ ಕಲ್ಲುರ್ಟಿ ಗುಳಿಗ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಪ್ರಯುಕ್ತ ವಿಶೇಷವಾಗಿ ಶ್ರೀ ದೈವಗಳಿಗೆ ತಂಬಿಲ ಸೇವೆಯು ನಡೆಯಿತು.

ಮಧ್ಯಾಹ್ನ ಅರ್ಚಕ ಹರಿಕೃಷ್ಣ ಭಟ್ ರವರ ನೇತೃತ್ವದಲ್ಲಿ ತಂಬಿಲದ ಪೂಜಾ ಕೈಂಕರ್ಯ ನೆರವೇರಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಧರ್ಮದರ್ಶಿಪಿ.ಕೆ. ಉಮೇಶ್, ಧರ್ಮದರ್ಶಿ ಮಂಡಳಿಯ ಸದಸ್ಯರಾದ ಸೋಮನಾಥ ಪೂಜಾರಿ, ಭಾಸ್ಕರ ಐಡಿಯಲ್, ಹರೀಶ್ ಬೂಡುಪನ್ನೆ, ಕೇಶವ ನಾಯಕ್,
ಸತ್ಯ ಪ್ರಸಾದ್ ರವರು ಉಪಸ್ಥಿತರಿದ್ದರು.

ಅಪರಾಹ್ನ ಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ದೈವಸ್ಥಾನದ ಪೂಜಾರಿ ಮೋನಪ್ಪ ಗೌಡ,ತಿಮ್ಮಪ್ಪ ಗೌಡ ನಾವೂರು ರವರು ಸಹಕರಿಸಿದರು.
ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.