ಐವರ್ನಾಡಿನಲ್ಲಿ ಸಂಜೀವಿನಿ ಸಂಘದ ಅಕ್ಕ ಹೋಟೆಲ್ ಶುಭಾರಂಭ

0

ಐವರ್ನಾಡಿನ ಮುಖ್ಯ ರಸ್ತೆ ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಸಮಗ್ರ ಸಂಜೀವಿನಿ ಅಡಿಯಲ್ಲಿ ರಚನೆಯಾಗಿರುವ ತೃಪ್ತಿ ಸಂಜೀವಿನಿ ಸಂಘದ ಅಕ್ಕ ಹೋಟೆಲ್ ಜೂ.20 ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಿವೃತ್ತ ಅರ್ಚಕ ಪದ್ಮನಾಭ ಭಟ್ ರವರು ಗಣಹೋಮ ನೆರವೇರಿಸಿದರು.


ನಂತರ ಐವರ್ನಾಡಿನ ನಿವೃತ್ತ ಶಿಕ್ಷಕಿ ಹರಿಣಾಕ್ಷಿ ಜೆ.ಯವರು ನೂತನ ಹೋಟೆಲನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಂಜೀವಿನಿ ಒಕ್ಕೂಟದ ತಾಲೂಕು ಸಂಯೋಜಕಿ ಶ್ವೇತಾ,ಬಿಆರ್ ಪಿ ಜಯಲಕ್ಷ್ಮೀ, ಕಟ್ಟಡ ಮಾಲಕ ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ,ಎಂಬಿಕೆ ಅಮಿತ, ಎಲ್.ಸಿ.ಆರ್.ಪಿ.ಮಮತಾ,ಕೃಷಿ ಉದ್ಯೋಗ ಸಖಿ ಹರ್ಷಿತಾ, ಕೃಷಿ ಸಖಿ ರೇಖಾ ಯು,ಗ್ರಾ.ಪಂ.ಸದಸ್ಯೆ ಶ್ರೀಮತಿ ಸುಜಾತ ಪವಿತ್ರಮಜಲು,ಶ್ರೀಮತಿ ರೇಖಾ ಉದ್ದಂಪಾಡಿ, ಪಂಚಾಯತ್ ಕಾರ್ಯದರ್ಶಿ ತಿರುಮಲೇಶ್ವರ್, ರಾಜೇಶ್ ನೆಕ್ರೆಪ್ಪಾಡಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಹೋಟೆಲ್ ಮಾಲಕರಾದ ಕೀರ್ತನರವರು ಸ್ವಾಗತಿಸಿದರು.
ಇಲ್ಲಿ ಸಸ್ಯಹಾರಿ,ಮಾಂಸಹಾರಿ ಊಟ,ಚಾ.ತಿಂಡಿ,ಫಾಸ್ಟ್ ಫುಡ್ ದೊರೆಯುತ್ತದೆ.
ಕ್ಯಾಟರಿಂಗ್ ವ್ಯವಸ್ಥೆ ಕೂಡ ಇರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.