`ಸಂಧ್ಯಾ ಚೇತನ’ ಸುಳ್ಯ ತಾಲೂಕು ಹಿರಿಯ ನಾಗರಿಕರ ಸಂಘದ ಮಹಾಸಭೆ

0

`ಸಂಧ್ಯಾ ಚೇತನ’ ಸುಳ್ಯ ತಾಲೂಕು ಹಿರಿಯ ನಾಗರಿಕರ ಸಂಘದ ಮಹಾಸಭೆಯು ಜೂ.೨೫ ರಂದು ಕಾನತ್ತಿಲ ರಸ್ತೆಯಲ್ಲಿರುವ ಹಿರಿಯರ ಮನೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪ್ರಭಾಕರ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಂಗನಾಥ್ ಕೆಎಫ್‌ಡಿಸಿ, ವೇದಿಕೆಯಲ್ಲಿ ಗೌರವಾಧ್ಯಕ್ಷ ಬಾಪು ಸಾಹೇಬ್, ಕಾರ್ಯದರ್ಶಿ ಚೆನ್ನಕೇಶವ ಜಾಲ್ಸೂರು, ಕೋಶಾಧಿಕಾರಿ ಡಾ.ರಂಗಯ್ಯ ಉಪಸ್ಥಿತರಿದ್ದರು.


ಹಿರಿಯ ನಾಟಿ ವೈದ್ಯರಾದ ಸೂಂತೋಡು ಜನಾರ್ದನ ಗೌಡ ಹಾಗೂ ಶ್ರೀಮತಿ ವಿನೋದ ಸುಂದರ ಸರಳಾಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಪ್ರೊ.ಕೆ.ವಿ.ದಾಮೋದರ್ ಸ್ವಾಗತಿಸಿ, ಎಂ.ಸುಬ್ರಹ್ಮಣ್ಯ ಹೊಳ್ಳ ವಂದಿಸಿದರು. ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು. ಅಗಲಿದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


ವಾರ್ಷಿಕ ಲೆಕ್ಕಪತ್ರವನ್ನು ರಾಮಚಂದ್ರ ಪಲ್ಲತಡ್ಕ ಮಂಡಿಸಿದರು. ಚೆನ್ನಕೇಶವ ಜಾಲ್ಸೂರು ವರದಿ ಮಂಡಿಸಿದರು.


೨೦೨೪-೨೫ ನೇ ಸಾಲಿನ ಕಾರ್ಯಕಾರಿ ಸಮಿತಿ ರಚಿಸುವ ಸಂದರ್ಭ ಹಿಂದಿನ ಸಮಿತಿಯನ್ನೇ ಮುಂದುವರಿಸಿಕೊಂಡು ಹೋಗುವುದೆಂದು ತೀರ್ಮಾನಿಸಲಾಯಿತು. ಸುಬ್ರಹ್ಮಣ್ಯ ಹೊಳ್ಳ ಮತ್ತು ಪದ್ಮನಾಭ ನಾಯರ್‌ರವರನ್ನು ಸಮಿತಿಗೆ ತೆಗೆದುಕೊಳ್ಳಲಾಯಿತು. ಸಭಾ ಕಾರ್ಯಕ್ರಮಕ್ಕೆ ಮೊದಲು ಸಂಘದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ, ಬಹುಮಾನ ವಿತರಿಸಲಾಯಿತು.