ಕೆಡಿಪಿ ಸಭೆಯಲ್ಲಿ ಅಡಿಕೆ ಹಳದಿ ರೋಗ, ಎಲೆ ಚುಕ್ಕಿ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆದ ಸಂಸದ ಬ್ರಿಜೇಶ್ ಚೌಟ

0

ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಇಂದು ತ್ರೈ ಮಾಸಿಕ ಕೆಡಿಪಿ ಸಭೆ ನಡೆಯಿತು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,ಜಿ.ಪಂಚಾಯತ್ ಸಿಇಓ,ಪೊಲೀಸ್ ವರಿಷ್ಠಾಧಿಕಾರಿ,ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ ಹಲವು ವರ್ಷಗಳಿಂದ ಸುಳ್ಯ ಮತ್ತು ಜಿಲ್ಲೆಯ ಉಳಿದ ಭಾಗದಲ್ಲಿ ಅಡಿಕೆ ಕೃಷಿಗೆ ಬಾಧಿಸುತ್ತಿರುವ ಹಳದಿ ರೋಗ ದಿಂದ ರೈತರು ಕಂಗಾಲಾಗಿದ್ದು, ಜೀವನ ಮಾಡಲು ಕಷ್ಟಪಡುತ್ತಿದ್ದರೆ ಆಲ್ಲದೆ ಎಲೆ ಚುಕ್ಕಿ ರೋಗ ಕೂಡ ಆವರಿಸಿದೆ ಸರ್ಕಾರ ಈ ಬಗ್ಗೆ ಗಮನ ಹರಿಸಿ,ಶಾಶ್ವತ ಪರಿಹಾರದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವಂತೆ ಒತ್ತಾಯಿಸಿದರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಕಾರಾತ್ಮಕ ವಾಗಿ ಸ್ಪಂದಿಸಿದ್ದು,ಸರ್ಕಾರ ಅಡಿಕೆ ಕೃಷಿಕರಿಗೆ ನೆರವಾಗುವ ಭರವಸೆ ನೀಡಿದ್ದಾರೆ.