ಆಲೆಟ್ಟಿ : ವನಮಹೋತ್ಸವ

0

ಮಂಗಳೂರು ವಿಭಾಗ , ಸುಳ್ಯ ವಲಯದ ಆಲೆಟ್ಟಿ ಶಾಖೆ ವ್ಯಾಪ್ತಿಯ ಕನ್ನಡಿತೋಡು – ಚೆರ್ನುರು ಗ್ರಾಮ ಅರಣ್ಯ ಸಮಿತಿ ಸದಸ್ಯರು, ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು, ಹಾಗೂ ಗ್ರಾಮಸ್ಥರೊಂದಿಗೆ ಕೋಲ್ಚಾರು ಎಂಬಲ್ಲಿ ನ ಅರಣ್ಯ ಪ್ರದೇಶದಲ್ಲಿ ಜುಲೈ 7 ರಂದು ವನ‌ ಮಹೋತ್ಸವ ಕಾರ್ಯಕ್ರಮ‌ ಮಾಡಲಾಯಿತು. ಗ್ರಾಮ ಪಂಚಾಯತಿ ಸದಸ್ಯರಾದ ಗೀತಾ ಕೋಲ್ಛಾರು
ರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.


ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿರುವ ಶ್ರೀಮತಿ ಶಂಕರಿ ಕೊಲ್ಚಾರ್ , ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್,
ಸಮಿತಿ ಸದಸ್ಯರು, ಇಲಾಖಾ ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದರು.