ಪೈಂಬೆಚಾಲ್ : ವನಮಹೋತ್ಸವ

0

ಮಂಗಳೂರು ವಿಭಾಗ , ಸುಳ್ಯ ವಲಯದ ಆಲೆಟ್ಟಿ ಶಾಖೆ ವ್ಯಾಪ್ತಿಯ ಆಲೆಟ್ಟಿ ಗ್ರಾಮದ ಪೈಂಬೆಚಾಲ್ ಎಂಬಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜುಲೈ 8 ರಂದು ಗಿಡ ನೆಡುವುದರ ಮೂಲಕ ವನ‌ ಮಹೋತ್ಸವ ಆಚರಿಸಲಾಯಿತು.


ಗ್ರಾಮ ಪಂಚಾಯತಿ ಸದಸ್ಯರಾದ ಗೀತಾ ಕೋಲ್ಛಾರು
ರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಅಬ್ದುಲ್ ಪೈಜಿ ಅಧ್ಯಕ್ಷತೆ ವಹಿಸಿದ್ದರು. ವನಮಹೋತ್ಸವ ಆಚರಣೆ ಬಗ್ಗೆ ಆಲೆಟ್ಟಿ ಶಾಖಾ ಉಪ ವಲಯ ಅರಣ್ಯಾಧಿಕಾರಿಗಳಾದ ವೆಂಕಟೇಶ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.


ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಕೊಲ್ಚಾರ್, ಧರ್ಮಪಾಲ ಕೊಯಿಂಗಾಜೆ, ಮುಖ್ಯ ಶಿಕ್ಷಕರಾದ ವಿಶಾಲಾಕ್ಷಿ ಇದ್ದರು.
ಎಸ್.ಡಿ.ಎಂ.ಸಿ. ಸಮಿತಿ ಸದಸ್ಯರು, ಇಲಾಖಾ ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದರು.
ಶಿಕ್ಷಕಿ ಪ್ರತಿಮಾ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.