ಶಾಸಕ ಎ.ಎಸ್. ಪೊನ್ನಣ್ಣ ಐವತ್ತನೇ ಹುಟ್ಟುಹಬ್ಬ ಹಿನ್ನೆಲೆ

0

ಕೊಡಗು ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿಶೇಷ ಪೂಜೆ – ಸ್ವಚ್ಛತಾ ಕಾರ್ಯ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಐವತ್ತನೇ ಹುಟ್ಟುಹಬ್ಬದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ, ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.

ಕಾಂಗ್ರೆಸ್ ಕಾರ್ಯಕರ್ತರು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ ನಡೆಸಿ, ಬಳಿಕ ಸಂಪಾಜೆಯ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪೆನ್ ವಿತರಣೆ ಮಾಡಿದರು.
ಬಳಿಕ ಸಂಪಾಜೆ ಗೇಟ್ ಬಳಿಯಿಂದ ಸ್ವಚ್ಛತಾ ಕಾರ್ಯವನ್ನು ನಡೆಸಿ ಪೊನ್ನಣ್ಣ ನವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ. ಎಲ್. ಸುರೇಶ್, ಜಿಲ್ಲಾ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಸ್. ಪಿ, ನಾಪೋಕ್ಲು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ವರಿ ಕೆ. ಕೆ, ತಿರುಮಲ ಸೋನಾ, ಸಂಪಾಜೆ ಬೂತ್ ಅಧ್ಯಕ್ಷ ರಿತಿನ್ ಡೆಮ್ಮಲೆ, ಉಮೇಶ್ ನಿಡುಬೆ, ವಿಜಯಕುಮಾರ್ ಕನ್ಯಾನ,ಎನ್.ಎಸ್ .ಯು. ಐ. ಕಾರ್ಯದರ್ಶಿ ರುನೈಜ್, ಸುಧೀರ್ ಹೊದ್ದೆಟ್ಟಿ, ತಿಮ್ಮಪ್ಪ ಬಿ. ಎನ್. ,ಮೋಹನ ಬಾಳಕಜೆ, ಜಗನ್ ಡೆಮ್ಮಲೆ, ಗೋಪಾಲ ಪೂಜಾರಿ,ರಾಜೇಶ್ ಕುದ್ಕುಳಿ, ಮಾದವ, ನಾರಾಯಣ, ನಾಸೀರ್ ಮಾಡಶೇರಿ ಮತ್ತಿತರರು ಉಪಸ್ಥಿತರಿದ್ದರು.