ಕೆಎನ್‌ಎಸ್‌ಎಸ್ ಸುಳ್ಯ ಕರಯೋಗಂ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

0

ಭವಾನಿ ನಾಯರ್ ಬಾರ್ಪಣೆ – ಅಧ್ಯಕ್ಷೆ, ಶೈಲಜಾ ನೀರಬಿದಿರೆ – ಕಾರ್ಯದರ್ಶಿ

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಸುಳ್ಯ ಕರಯೋಗಂ ಮಹಿಳಾ ಘಟಕದ ಮುಂದಿನ ಎರಡು ವರ್ಷಗಳ ಸಾಲಿಗೆ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಭವಾನಿ ನಾರಾಯಣನ್ ನಾಯರ್ ಬಾರ್ಪಣೆ ಹಾಗೂ ಕಾರ್ಯದರ್ಶಿಯಾಗಿ ಶ್ರೀಮತಿ ಶೈಲಜಾ ಜಯನ್ ನೀರಬಿದಿರೆ ಆಯ್ಕೆಯಾಗಿದ್ದಾರೆ.

ಜು. 14 ರಂದು ಕುರುಂಜಿ ಭಾಗ್ ಸ್ವಾಗತ್ ಬಿಲ್ಡಿಂಗ್ ನಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಉಪಾಧ್ಯಕ್ಷರಾಗಿ ಶ್ರೀಮತಿ ಪ್ರತಿಭಾ ದುರ್ಗಾಕುಮಾರ್, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಸುಧಾ ಚಂದ್ರಮೋಹನ್, ಕೋಶಾಧಿಕಾರಿಯಾಗಿ ಶ್ರೀಮತಿ ಜ್ಯೋತಿ ಮಧುಸೂಧನ್, ಸಹ ಕೋಶಾಧಿಕಾರಿಯಾಗಿ ಶ್ರೀಮತಿ ಬಿಂದು ಗೋವಿಂದನ್ ಆಯ್ಕೆಗೊಂಡರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಮತಿ ರಜಿತಾ ಗಣೇಶ್ ಸುಬ್ರಹ್ಮಣ್ಯ, ಶ್ರೀಮತಿ ನಳಿನಿ ವಿಶ್ವನಾಥ ನಾಯರ್ ಮಧುವನ, ಶ್ರೀಮತಿ ವಾಣಿ ರಮೇಶ್, ಶ್ರೀಮತಿ ಶಕುಂತಳಾ ಕೃಷ್ಣನ್, ಶ್ರೀಮತಿ ಕುಸುಮಾ ವೇಣು, ಶ್ರೀಮತಿ ಸುನಿತಾ ಮಧು, ಶ್ರೀಮತಿ ದಾಕ್ಷಾಯಣಿ ಭಾಸ್ಕರನ್ ಮಧುವನ, ಶ್ರೀಮತಿ ವೀಣಾ ಪ್ರಭಾಕರನ್, ಶ್ರೀಮತಿ ಅರುಣಾ ಪ್ರಮೋದ್, ಶ್ರೀಮತಿ ಶ್ರೀಜಿಶಾ ಚಂದ್ರಶೇಖರ್, ಶ್ರೀಮತಿ ಶಶಿಕಲಾ ಪ್ರಭಾಕರನ್, ಶ್ರೀಮತಿ ಶ್ರೀಕಲಾ ಬಾಲಕೃಷ್ಣನ್ ಆಯ್ಕೆಗೊಂಡರು.