ಜಾಲ್ಸೂರು : ಶ್ರೀ ಕ್ಷೇತ್ರ ಧ.ಗ್ರಾ.ಯೋ. ವತಿಯಿಂದ ವಾಟರ್ ಬೆಡ್ ಕೊಡುಗೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ ತಾಲೂಕು ಸಹಬಾಗಿತ್ವದಲ್ಲಿ ಜು.15ರಂದು ವಾಟರ್ ಬೆಡ್ ಕೊಡಗೆಯಾಗಿ ನೀಡಲಾಯಿತು.

ಜಾಲ್ಸೂರು ವಲಯದ ಜಯಂತ ಜಾಲ್ಸೂರು ಅವರು ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದು ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ನೀಡಲಾಯಿತು.

ಈ ಸಂದರ್ಭದಲ್ಲಿ ಅಂಜನಾದ್ರಿ ಒಕ್ಕೂಟದ ಅಧ್ಯಕ್ಷರು, ಜಾಲ್ಸೂರು ವಲಯದ ನವಜೀವನ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಜಾಲ್ಸೂರು, ಅಂಜನಾದ್ರಿ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಮಲ್ಲಿಕಾ ಜಾಲ್ಸೂರು ವಲಯ ಮೇಲ್ವಿಚಾರಕ ತೀರ್ಥರಾಮ ಜಾಲ್ಸೂರು ಗ್ರಾಮದ ಸೇವಾಪ್ರತಿನಿಧಿ ಚಂದ್ರಕಲಾ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.