ಕೊಡಗು ಸಂಪಾಜೆ: ಪೊಲೀಸ್ ಉಪಠಾಣಾ ಸಿಬ್ಬಂದಿ ರಾಜೇಶ್ ಕುಶಾಲನಗರಕ್ಕೆ ವರ್ಗಾವಣೆ

0

ಉಪಠಾಣಾ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ

ಕೊಡಗು ಸಂಪಾಜೆ ಪೊಲೀಸ್ ಉಪಠಾಣೆಯಲ್ಲಿ ಕಳೆದ ಏಳು ತಿಂಗಳಿಂದ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಅವರಿಗೆ ಕೊಡಗಿನ ಕುಶಾಲನಗರಕ್ಕೆ ವರ್ಗಾವಣೆಯಾಗಿದ್ದು, ಅವರನ್ನು ಜು.15ರಂದು ಉಪಠಾಣಾ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.

ಕೊಡಗು ಸಂಪಾಜೆಯ ಫಾರೆಸ್ಟ್ ಐ.ಬಿ. ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಉಪಠಾಣಾ ಎ.ಎಸ್.ಐ. ಸುಂದರ ಸುವರ್ಣ ಅವರು ರಾಜೇಶ್ ಅವರನ್ನು ಸನ್ಮಾನಿಸಿ, ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಉಪಠಾಣಾ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.