ಪಂಜದ ಮನು ಯಂ ರವರಿಗೆ ‘ಕಲಾಪೋಷಕರತ್ನ’ಪ್ರಶಸ್ತಿ ಪ್ರದಾನ

0

ಆರ್.ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರು ಇದರ ವತಿಯಿಂದ ಪಂಜದ ತೊಂಡಚ್ಚನ್ ಇಂಡಸ್ಟ್ರೀಸ್ ಮಾಲಕ ಮನು ಯಂ ರವರನ್ನು ‘ಕಲಾ ಪೋಷಕರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಿರು ಚಿತ್ರ, ಭಕ್ತಿಗೀತೆ ನಿರ್ಮಾಪಕ, ತುಳು ನಾಟಕ ನಿರ್ಮಾಣಕ್ಕೆ ಸಂಪೂರ್ಣ ಸಹಕಾರಿಸುತ್ತಾ ಕಲಾ ವೇದಿಕೆಗೆ ಕೊಡುಗೈ ದಾನಿಯಾಗಿ ಕಲಾ ಸೇವೆಯನ್ನು ಪರಿಗಣಿಸಿ ಮನು ಯಂ ರವರಿಗೆ ‘ಕಲಾ ಪೋಷಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪೆರ್ಲಂಪಾಡಿಯ ಅಂಬೇಡ್ಕರ್ ಭವನದಲ್ಲಿ ಜು.21 ರಂದು ನಡೆದ ಗ್ರ್ಯಾಂಡ್ ಫಿನಾಲೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಹಲವಾರು ಜನ ಗಣ್ಯರು ಉಪಸ್ಥಿತರಿದ್ದರು.