ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಕೊಡಗು ಮೂಲದ ಭಕ್ತ

0

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಕೊಡಗು ಮೂಲದ ಭಕ್ತನೋರ್ವ ಸುಬ್ರಹ್ಮಣ್ಯ ದಲ್ಲಿ ಕಾಣೆಯಾಗಿ ತಿಂಗಳಾದ್ರು ಪತ್ತೆಯಾಗದೆ ಘಟನೆ ವರದಿಯಾಗಿದೆ.

ಕೊಡಗು ಜಿಲ್ಲೆ, ಪೊನ್ನಪೇಟೆ ತಾಲೂಕು, ಮಾಯಾಮುಡಿ, ಚನ್ನಂಗುಳಿ ಗ್ರಾಮ ಎಂಬಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಪೂಜೆ ಮಾಡಲು ಮೂವತ್ತು ಭಕ್ತರೊಳಗೊಂಡ ಕುಟುಂಬ ಜೂ.24 ರಂದು ಕುಕ್ಕೆಗೆ ಸುಬ್ರಹ್ಮಣ್ಯಕ್ಕೆ ಬಂದು ಎರಡು ದಿನಗಳ ಕಾಲ ಇದ್ದು ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಾರೆ, ಪೂಜೆ ಮುಗಿಸಿ ಜೂ. 26ರಂದು ಕುಟುಂಬದ ಸದಸ್ಯ 49 ವರ್ಷ ಪ್ರಾಯದ ರಘು ಎಂಬವರು ಕಾಣೆಯಾಗಿರುತ್ತಾರೆ.

ಕುಟುಂಬದ ಸದಸ್ಯರು ಸಾಕಷ್ಟು ಹುಡುಕಾಡಿ ಸಿಗದಿದ್ದಾಗ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದೀಗ ಒಂದು ತಿಂಗಳು ಕಳೆದರೂ ರಘು ಅವರು ಪತ್ತೆಯಾಗಿಲ್ಲ. ರಘು ಪತ್ನಿ ರುಕ್ಮಿಣಿ ಹಾಗೂ ಇಬ್ಬರು ಮಕ್ಕಳು ರಘು ಅವರನ್ನು ಈಗಲೂ ಇಂದು ಬಂದಾರು ನಾಳೆ ಬಂದಾರು ಎಂದು ಕಾಯುತಿದ್ದು ಕುಟುಂಬಸ್ಥರು ರಘುವಿನ ಹುಡುಕಾಟದಲ್ಲಿ ಇರುವುದಾಗಿ ತಿಳಿದು ಬಂದಿದೆ.

ಸಾರ್ವಜನಿಕರು ಇವರನ್ನು ಕಂಡಲ್ಲಿ 90358 35236 ದೂರವಾಣಿಗೆ ಸಂಪರ್ಕಿಸುವಂತೆ ಕೋರಲಾಗಿದೆ.