ಗುರುವಮೊಟ್ಟೆ ಪರಿಸರದಲ್ಲಿ ನಾಲ್ಕು ದಿನಗಳಿಂದ ಕರೆಂಟಿಲ್ಲ : ನೀರಿಗೂ ಸಮಸ್ಯೆ – ಸ್ಪಂದಿಸುವುದೇ ಮೆಸ್ಕಾಂ

0

ಅಜ್ಜಾವರ ಗ್ರಾಮದ ಗುರುವಮೊಟ್ಟೆ ಪ್ರದೇಶದಲ್ಲಿ ನಾಲ್ಕು ದಿನಗಳಿಂದ ಕರೆಂಟಿಲ್ಲ – ಕರೆಂಟಿಲ್ಲದ ಕಾರಣ ನೀರಿಗೂ ಸಮಸ್ಯೆ ಯಾಗಿದೆ. ಮೆಸ್ಕಾಂಗೆ ತಿಳಿಸಿದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಗುರುವಮೊಟ್ಟೆ ಪ್ರದೇಶದವರು ಅಳವತ್ತುಕೊಂಡಿದ್ದಾರೆ.

ಗುರುವಮೊಟ್ಟೆಯಲ್ಲಿ ಒಂದು ವಿದ್ಯುತ್ ಕಂಬ ತುಂಡಾಗಿ ನಾಲ್ಕುದಿನದಿಂದ ಕರೆಂಟಿಲ್ಲ. ಮೆಸ್ಕಾಂ ನ ಲೈನ್ ಮೆನ್, ಇಂಜಿನಿಯರ್ ರಿಗೆ ತಿಳಿಸಿದೆವು.‌ ಸ್ಪಂದನೆ ಸಿಗುತ್ತಿಲ್ಲ. ಮಂಗಳೂರು ಕಚೇರಿಗೆ ದೂರು ನೀಡಿದರೂ ಬಿದ್ದ ಕಂಬ ಸರಿ ಪಡಿಸಿಲ್ಲ. ಆದ್ದರಿಂದ ಬಿದ್ದಿರುವ ವಿದ್ಯುತ್ ಕಂಬ ಸರಿ ಪಡಿಸಿ, ವಿದ್ಯುತ್ ಬರುವಂತೆ ಮಾಡಿದರೆ‌ ನಮಗೆ ನೀರು‌ಬರುವಂತೆ ಅಧಿಕಾರಿಗಳು‌ ಮಾಡಬೇಕು ಎಂದು ಇಬ್ರಾಹಿಂ ಗುರುವಮೊಟ್ಟೆ ಎಂಬವರು ಸುದ್ದಿ ಯ ಮೂಲಕ ಅಧಿಕಾರಿ ಗಳಲ್ಲಿ ಮನವಿ ಮಾಡಿಕೊಂಡಿದ್ದಾರಸ.