ಸಂಪಾಜೆ: ಚೌಕಿಯಲ್ಲಿ ಹಟ್ಟಿಯಿಂದ ದನ ಕಳವು

0

ಕಲ್ಲುಗುಂಡಿ ಪೊಲೀಸ್ ಹೊರಠಾಣೆಯಲ್ಲಿ ದೂರು ದಾಖಲು

ರಾತ್ರಿ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ದನಗಳನ್ನು ಕಳ್ಳರು ಕದ್ದೊಯ್ದ ಘಟನೆ ದ.ಕ. ಸಂಪಾಜೆ ಗ್ರಾಮದ ಚೌಕಿಯಲ್ಲಿ ಜು.25ರಂದು ರಾತ್ರಿ ಸಂಭವಿಸಿದೆ.

ಸಂಪಾಜೆಯ ವಕೀಲರಾದ ಪುಷ್ಪರಾಜ್ ಗಾಂಭೀರ ಅವರ ಮನೆಯ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ಎರಡು ದನಗಳನ್ನು ರಾತ್ರಿವೇಳೆ ಕಳ್ಳರು ಕದ್ದೊಯ್ದಿದ್ದು , ಪುಷ್ಪರಾಜ್ ಅವರು ಬೆಳಗ್ಗೆ ಎದ್ದು ನೋಡಿದಾಗ ದನ ಕಳ್ಳತನವಾಗಿರುವ ಘಟನೆ ತಿಳಿದಿದ್ದು, ಅವರು ಕಲ್ಲುಗುಂಡಿ ಪೊಲೀಸ್ ಹೊರಠಾಣೆಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.

ಕೇಸು ದಾಖಲಿಸಿಕೊಂಡ ಪೊಲೀಸರು ಜು.26ರಂದು ಬೆಳಿಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.