ಜಯನಗರ: ಭಾರಿ ಗಾಳಿ ಮಳೆಗೆ ಮರ ಬಿದ್ದು ವಿದ್ಯುತ್ ತಂತಿ ಹಾಗೂ ಆಚಾರಿ ಕೊಟ್ಟಿಗೆಗೆ ಹಾನಿ

0

ಜಯನಗರ ಅಂಗನವಾಡಿ ಕೇಂದ್ರದ ಬಳಿ ವಿದ್ಯುತ್ ತಂತಿ ಮೇಲೆ ಹಲಸಿನ ಮರವೊಂದು ಮುರಿದು ಬಿದ್ದು ವಿದ್ಯುತ್ ತಂತಿ ಹಾಗೂ ಕಂಬಕ್ಕೆ ಹಾನಿಯಾಗಿದ್ದು ಸ್ವಲ್ಪ ದೂರದಲ್ಲಿರುವ ಉಮೇಶ್ ಆಚಾರ್ಯ ಇವರ ಆಚಾರಿ ಕೊಟ್ಟಿಗೆಗೆ ಪಕ್ಕದಲ್ಲಿದ್ದ ಉಪ್ಪಳಿಗೆ ಮರವೊಂದು ತುಂಡಾಗಿ ಬಿದ್ದು ಹಾನಿ ಸಂಭವಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ರಾತ್ರಿ 9 ಘಂಟೆಯ ಸಮಯದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಘಟನೆ ಸಂಭವಿಸಿದ್ದು ರಸ್ತೆಯಲ್ಲಿ ಯಾವುದೇ ವಾಹನ ಇಲ್ಲದ ಕಾರಣ ಮತ್ತು ಆಚಾರಿ ಕೊಟ್ಟಿಗೆಯಲ್ಲಿ ಕೆಲಸಗಾರರು ಯಾರು ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.


ಸ್ಥಳಕ್ಕೆ ಮೆಸ್ಕಾಂ ಇಲಾಖೆಯವರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.