ಓಡಬಾಯಿ ಬಳಿ ಬೀಳುವ ಸ್ಥಿತಿಯಲ್ಲಿದೆ ಅಪಾಯಕಾರಿ ಮರ-ತೆರವುಗೊಳಿಸಲು ಮನವಿ

0

ಸುಳ್ಯದ ಮುಖ್ಯ ರಸ್ತೆಯ ಓಡಬಾಯಿ ವಿದ್ಯಾನಗರ ಎಂಬಲ್ಲಿ ಖಾಸಗಿ ಜಮೀನಿನಲ್ಲಿ ಇರುವ ಮರವೊಂದು ಪಕ್ಕದಲ್ಲಿ ಇರುವ ಕಟ್ಟಡದ ಮೇಲೆ ಬೀಳುವ ಅಪಾಯಕಾರಿ ಸ್ಥಿತಿಯಲ್ಲಿ ಇದೆ‌. ಮರ ತೆರವು ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಇದುವರೆಗೆ ತೆರವು ಮಾಡಲಿಲ್ಲ ಎಂದು ಸ್ಥಳೀಯ ಹೋಟೆಲ್ ಮಾಲಕರು ದೂರು ನೀಡಿದ್ದಾರೆ. ಇದೀಗ ವಿಪರೀತ ಮಳೆ ಸುರಿಯುತ್ತಿದ್ದು ಮರದ ಬುಡ ಭಾಗದಲ್ಲಿ ಮಣ್ಣು ಕುಸಿಯಲಾರಂಭಿಸಿದೆ. ಒಂದು ವೇಳೆ ಮರ ಬಿದ್ದಲ್ಲಿ ಕಟ್ಟಡಕ್ಕೆ ಹಾನಿಯಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದವರು ಈ ಬಗ್ಗೆ ಮುತುವರ್ಜಿ ವಹಿಸುವಂತೆ ಸ್ಥಳೀಯ ಹೋಟೆಲ್ ಮಾಲಕ ಶಿವಾನಂದ ರವರು ಮನವಿ ಮಾಡಿಕೊಂಡಿದ್ದಾರೆ.